ನೀರು ಶುದ್ಧೀಕರಣ ಯಂತ್ರ:
ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯು ವಿಭಾಗೀಯ ರೈಲ್ವೆ ಆಸ್ಪತ್ರೆಗೆ ನೀರು ಶುದ್ಧೀಕರಣದ ಎರಡು ಯಂತ್ರಗಳನ್ನು ನೀಡಿತು. ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ರೀನಾ ಸಿಂಗ್, ಕಾರ್ಯದರ್ಶಿ ನಿಧಿ ಶರ್ಮಾ, ಖಜಾಂಚಿ ಭಾಗ್ಯಶ್ರೀ, ಮುಖ್ಯ ವೈದ್ಯಕೀಯ ಅಧೀಕ್ಷಕಿ ಪ್ರಭಾವತಿ ಗಜಲಕ್ಷ್ಮಿ ಉಪಸ್ಥಿತರಿದ್ದರು.