ರಾಜರಾಜೇಶ್ವರಿನಗರ: ಶುಕ್ರವಾರ ಸಂಜೆ ಬೀಸಿದ ಬಾರಿ ಗಾಳಿಗೆ ರೈತರಾದ ಎಂ.ಜೈಕುಮಾರ್ ಮತ್ತು ಎಂ.ರಾಜ್ ಕುಮಾರ್ ಅವರ ಮಾವಿನ ತೋಪಿನಲ್ಲಿ ಬೆಳೆದಿದ್ದ ಕಾಯಿಗಳು ಉದುರಿವೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಪಚ್ಚೆಪಾಳ್ಯದ ಪ್ರಗತಿಪರ ರೈತರಾದ ಇವರು, 20 ಎಕರೆಯಲ್ಲಿ ಆಲ್ಫಾನ್ಸೊ, ಬಾದಾಮಿ ತಳಿಯ ಮಾವು ಬೆಳೆಸಿದ್ದಾರೆ. ಈ ಬಾರಿ ತೀವ್ರ ಬರದ ನಡುವೆಯೂ ಉತ್ತಮ ಫಸಲು ಬಂದಿತ್ತು.
‘ಗಾಳಿಗೆ ಉದುರಿ ಬಿದ್ದ ಮಾವಿನ ಕಾಯಿಗಳು ನೋಡಿ ನೋವುಂಟಾಗಿದೆ’ ಎಂದು ಎಂ. ಜೈಕುಮಾರ್ ಬೇಸರ ವ್ಯಕ್ತಪಡಿಸಿದರು.