‘ರೇರಾ ನಿಯಮ ಸುಧಾರಣೆ ಕೋರಿ, ರಾಜ್ಯ ಸರ್ಕಾರ ಮೂರನೇ ಬಾರಿ ಆಕ್ಷೇಪ ಗಳನ್ನು ಆಹ್ವಾನಿಸಿದೆ.2018 ಮೇನಲ್ಲಿ ಅಧಿಸೂಚನೆ ಹೊರಡಿಸಿದ ನಂತರ, ನಾವು ಹಲವು ಬಾರಿ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ, ಹಲವು ಆಕ್ಷೇಪಣೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಭಾಗಶಃ ಸ್ವಾಧೀನಾನುಭವ ಪತ್ರದ ಬದಲಿಗೆ, ಒಂದೇ ಬಾರಿ ಸಂಪೂರ್ಣ ಸ್ವಾಧೀನಾನುಭವ ಪತ್ರ ನೀಡುವ ನಿಯಮ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎಂದರು.