<p><strong>ಕೆಂಗೇರಿ:</strong> ‘ಮೂರು ವರ್ಷ ಮುಗಿಯುತ್ತಾ ಬಂದರೂ ರಸ್ತೆಗೆ ಡಾಂಬರು ಬೀಳುತ್ತಿಲ್ಲ. ಡಾಂಬರು ಹಾಕುವುದಕ್ಕಾಗಿ ರಸ್ತೆಗೆ ಹಾಕಿರುವ ಜಲ್ಲಿ ಕಲ್ಲನ್ನಾದರೂ ತೆಗೆದು ಉಪಕಾರ ಮಾಡಿ’ ಎಂದು ದೊಡ್ಡ ಬಿದರಕಲ್ಲು ವಾರ್ಡ್ ವ್ಯಾಪ್ತಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.</p><p>‘ಚುನಾವಣೆ ವೇಳೆ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿ ಜಲ್ಲಿ ಸುರಿಯಲಾಗಿತ್ತು. ಮೂರು ವರ್ಷವಾದರೂ ಗೆದ್ದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿ ಜಗದೀಶ್ ದೂರಿದರು.</p><p>‘ಮೂರು ತಿಂಗಳ ಒಳಗೆ ರಸ್ತೆ ಪೂರ್ಣಗೊಳಿಸದಿದ್ದರೆ, ರಸ್ತೆಯಲ್ಲಿರುವ ಜಲ್ಲಿಯನ್ನು ಬಿಬಿಎಂಪಿ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.</p><p>ಅನ್ನಪೂರ್ಣೇಶ್ವರಿ ಲೇಔಟ್ ಸೋಮಶೇಖರ್ ಮಾತನಾಡಿ, ‘ರಸ್ತೆ ಸರಿ ಇಲ್ಲದ ಕಾರಣ ಶಾಲೆಯ ಬಸ್ಗಳು ಬರುತ್ತಿಲ್ಲ. ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ಹತ್ತಾರು ವರ್ಷಗಳಿಂದ ದೊಡ್ಡ ಬಿದರಕಲ್ಲು ವಾರ್ಡ್ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೀಗಿದ್ದರೂ ಬಹುತೇಕ ಪ್ರದೇಶ, ಮೂಲ ಸೌಕರ್ಯ ಕೊರತೆ ಯಿಂದ ಸೊರಗುತ್ತಿದೆ’ ಎಂದು ಅಯ್ಯಂಗಾರ್ ಬಡಾವಣೆ ನಿವಾಸಿ ಗಿರಿಜಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಗೇರಿ:</strong> ‘ಮೂರು ವರ್ಷ ಮುಗಿಯುತ್ತಾ ಬಂದರೂ ರಸ್ತೆಗೆ ಡಾಂಬರು ಬೀಳುತ್ತಿಲ್ಲ. ಡಾಂಬರು ಹಾಕುವುದಕ್ಕಾಗಿ ರಸ್ತೆಗೆ ಹಾಕಿರುವ ಜಲ್ಲಿ ಕಲ್ಲನ್ನಾದರೂ ತೆಗೆದು ಉಪಕಾರ ಮಾಡಿ’ ಎಂದು ದೊಡ್ಡ ಬಿದರಕಲ್ಲು ವಾರ್ಡ್ ವ್ಯಾಪ್ತಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.</p><p>‘ಚುನಾವಣೆ ವೇಳೆ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿ ಜಲ್ಲಿ ಸುರಿಯಲಾಗಿತ್ತು. ಮೂರು ವರ್ಷವಾದರೂ ಗೆದ್ದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿ ಜಗದೀಶ್ ದೂರಿದರು.</p><p>‘ಮೂರು ತಿಂಗಳ ಒಳಗೆ ರಸ್ತೆ ಪೂರ್ಣಗೊಳಿಸದಿದ್ದರೆ, ರಸ್ತೆಯಲ್ಲಿರುವ ಜಲ್ಲಿಯನ್ನು ಬಿಬಿಎಂಪಿ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.</p><p>ಅನ್ನಪೂರ್ಣೇಶ್ವರಿ ಲೇಔಟ್ ಸೋಮಶೇಖರ್ ಮಾತನಾಡಿ, ‘ರಸ್ತೆ ಸರಿ ಇಲ್ಲದ ಕಾರಣ ಶಾಲೆಯ ಬಸ್ಗಳು ಬರುತ್ತಿಲ್ಲ. ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ಹತ್ತಾರು ವರ್ಷಗಳಿಂದ ದೊಡ್ಡ ಬಿದರಕಲ್ಲು ವಾರ್ಡ್ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೀಗಿದ್ದರೂ ಬಹುತೇಕ ಪ್ರದೇಶ, ಮೂಲ ಸೌಕರ್ಯ ಕೊರತೆ ಯಿಂದ ಸೊರಗುತ್ತಿದೆ’ ಎಂದು ಅಯ್ಯಂಗಾರ್ ಬಡಾವಣೆ ನಿವಾಸಿ ಗಿರಿಜಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>