'ಸುಂಕದಕಟ್ಟರ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು, ಟ್ರಾನ್ಸ್ಫಾರ್ಮರ್ ದುರಸ್ತಿಗೆ ಹೋದಾಗ ಈ ಘಟನೆ ನಡೆದಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
'ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್ಫಾರ್ಮರ್ನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಸಾರ್ವಜನಿಕರು ನೀಡಿದ್ದ ಮಾಹಿತಿಯಂತೆ ಗೌತಮ್ ಹಾಗೂ ಸಿದ್ದರಾಮ್ ಎಂಬುವರು ಸ್ಥಳಕ್ಕೆ ಹೋಗಿದ್ದರು. ಟ್ರಾನ್ಸ್ಫಾರ್ಮರ್ ಏರಿದ್ದ ಗೌತಮ್, ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ ಇನ್ನೊಂದು ಟ್ರಾನ್ಸ್ಫಾರ್ಮರ್ ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಅದನ್ನು ಗೌತಮ್ ಗಮನಿಸಿರಲಿಲ್ಲ. ಅದೇ ತಂತಿಯಿಂದಾಗಿ ವಿದ್ಯುತ್ ತಗುಲಿ ಗೌತಮ್ ಮೃತಪಟ್ಟಿದ್ದಾರೆ' ಎಂದೂ ತಿಳಿಸಿದರು.