ಪ್ರಕರಣವೇನು?: ಕಾಂತಾರದ ಯಶಸ್ಸಿಗೆ ಪ್ರತಿಕ್ರಿಯಿಸುತ್ತಾ ಚೇತನ್ ಕಳೆದ ಅಕ್ಟೋಬರ್ 18ರಂದು ಟ್ವೀಟ್ ಮಾಡುವ ಮೂಲಕ, ‘ಪಂಬದ, ಪರವರ, ನಲಿಕೆ ಬಹುಜನ ಸಂಪ್ರದಾಯಗಳು. ಹಿಂದೂ ಧರ್ಮಕ್ಕಿಂತ ಹಿಂದಿನಿಂದಲೂ ಇವೆ. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆ ಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.