‘ಉನ್ನತ ದರ್ಜೆಯ ಹೋಟೆಲ್ಗಳನ್ನು ಉಗ್ರಗಾಮಿಗಳು ಅಸಹ್ಯಕರವಾಗಿ ಕಾಣುತ್ತಾರೆ. ಇದಕ್ಕೆ, ಅಂತಹ ಹೋಟೆಲ್ಗಳು ಮುಕ್ತ ಸಮಾಜ ಹಾಗೂ ಪಾಶ್ಚಾತ್ಯ ಆದರ್ಶಗಳನ್ನು ಪ್ರತಿನಿಧಿಸುತ್ತಿರುವುದು ಕಾರಣ’ ಎಂದು ಉಗ್ರ–ನಿಗ್ರಹ ಕೇಂದ್ರದ ನಿರ್ದೇಶಕ ಬ್ರಿಗೇಡಿಯರ್ ಎಸ್.ಬೂಬೇಶ್ ಕುಮಾರ್ ಹೇಳಿದ್ದಾರೆ. ‘ಭಯೋತ್ಪಾದನೆ–ನಿಗ್ರಹ ಮತ್ತು ಆತಿಥ್ಯ ಕ್ಷೇತ್ರಕ್ಕಿರುವ ಭದ್ರತಾ ಆತಂಕಗಳು’ ವಿಷಯದ ಮೇಲಿನ ಕಾರ್ಯಾಗಾರದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.