ತಿಲಕ್ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಡ್ ವಿತರಿಸಿದ ಶಾಸಕ ರಾಮಲಿಂಗಾರೆಡ್ಡಿ, ‘ಕೊಳೆಗೇರಿ ನಿವಾಸಿಗಳಿಗೆ ಜಾಗದ ಹಕ್ಕುಪತ್ರ ವಿತರಣೆ ಮಾಡುವ ಬದಲು, ಇದೇ ಮೊದಲ ಬಾರಿಗೆ ಬಯೊಮೆಟ್ರಿಕ್ ಕಾರ್ಡ್ ವಿತರಿಸಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ಪಡೆಯಲು ಈ ಕಾರ್ಡ್ ನೆರವಾಗಲಿದೆ’ ಎಂದರು.