‘ಮಸೀದಿಗಳ ಮೇಲಿನ ಮೈಕ್ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಏಕೆ ತೆರವುಗೊಳಿಸುತ್ತಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತ ಹಿಂದೂಗಳು ಹೆಚ್ಚಿರುವ ದೇಶ. ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರು. ಅವರ ಧಾರ್ಮಿಕ ವಿಚಾರದ ಬಗ್ಗೆ ಚರ್ಚೆ ಮಾಡಬೇಕು. ಈ ವಿಷಯದಲ್ಲಿ ಎಲ್ಲರ ಸಹಕಾರ ಬೇಕು. ಮುಸ್ಲಿಂ ಸಮುದಾಯದ ಸಹಕಾರ ಪಡೆದು ಪ್ರಾರ್ಥನಾ ಮಂದಿರಗಳ ಮೇಲಿರುವ ಮೈಕ್ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಮಸೀದಿಗಳ ಮೇಲೆ ಇರುವ ಮೈಕ್ಗಳನ್ನು ತೆರವುಗೊಳಿಸಿದರೆ, ಮುಸ್ಲಿಮರ ಮೇಲೆ ಹಿಂದೂಗಳ ದೌರ್ಜನ್ಯ ಎಂದು ನೀವೇ ಅಪಪ್ರಚಾರ ಮಾಡುತ್ತೀರಿ’ ಎಂದು ಸುದ್ದಿರಾರರನ್ನೇ ದೂರಿದರು.