‘ಚಿಕ್ಕಪೇಟೆಯ ಬಸವಣ್ಣ ದೇವಸ್ಥಾನ ಸ್ಟ್ರೀಟ್ ನಿವಾಸಿ ಪುಷ್ಪಾ ಅವರು ಮನೆಯಿಂದ ಬೇಕರಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪುಷ್ಪಾ ಸಾವಿನ ಬಗ್ಗೆ ಮಗ ವಿನಯ್ ದೂರು ನೀಡಿದ್ದಾರೆ. ಬಿಎಂಟಿಸಿ ಚಾಲಕ ನಾಗರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಎಲೆಕ್ಟ್ರಿಕ್ ಬಸ್ (ಕೆಎ 51 ಎಎಚ್ 7667) ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.