<p><strong>ಬೆಂಗಳೂರು:</strong> 2020ರ ಜನವರಿ 1ರಿಂದ ಜಾರಿಗೆ ತಂದಿರುವ ವೇತನ ಪರಿಷ್ಕರಣೆ ಬಾಕಿಯನ್ನು 38 ತಿಂಗಳಿಂದಲೂ ಪಾವತಿ ಮಾಡಿಲ್ಲ. ಸುಮಾರು ₹ 1,700 ಕೋಟಿ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.</p>.<p>ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೂಲಸೌಕರ್ಯ ಕೊರತೆ, ಪಿ.ಎಫ್. ಇತ್ಯರ್ಥ, ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.</p>.<p>ನಾಲ್ಕು ಸಾರಿಗೆ ನಿಗಮಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಸರ್ಕಾರಿ ನೌಕರರಿಗೆ ಮೂಲ ವೇತನವನ್ನು ತುಟ್ಟಿ ಭತ್ಯೆಯೊಂದಿಗೆ ವಿಲೀನಗೊಳಿಸಿ 2024ರಿಂದ ಹೊಸ ವೇತನ ಪರಿಷ್ಕರಣೆ ಮಾಡಿದೆ. ಅದರ ಪ್ರಕಾರ ಸಾರಿಗೆ ನಿಗಮದ ನೌಕರರಿಗೂ ಸರ್ಕಾರಿ ನೌಕರರ ವೇತನದಂತೆ ಮೂಲವೇತನಕ್ಕೆ ತುಟ್ಟಿಭತ್ಯೆ ವಿಲೀನಗೊಳಿಸಿ ನೀಡಬೇಕಿದೆ. ಇದರ ಮೊತ್ತ ಅಂದಾಜು ₹ 10 ಕೋಟಿ ಆಗಬಹುದು ಎಂದು ಹೇಳಿದ್ದಾರೆ.</p>.<p>ಬಿಎಂಟಿಸಿಯಲ್ಲೇ ಸುಮಾರು 1,631 ವಿದ್ಯುತ್ ಚಾಲಿತ ಬಸ್ಗಳಿದ್ದು, ಈ ಬಸ್ಗಳ ಕಂಪನಿಗಳಿಗೆ ಮೂರು ತಿಂಗಳಿನಿಂದ ₹200 ಕೋಟಿ ಬಿಲ್ ಪಾವತಿ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನೌಕರರ ಗ್ರಾಚ್ಯುಟಿ, ರಜೆ ನಗದೀಕರಣ ಬಾಕಿ ₹ 315 ಕೋಟಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 2020ರ ಜನವರಿ 1ರಿಂದ ಜಾರಿಗೆ ತಂದಿರುವ ವೇತನ ಪರಿಷ್ಕರಣೆ ಬಾಕಿಯನ್ನು 38 ತಿಂಗಳಿಂದಲೂ ಪಾವತಿ ಮಾಡಿಲ್ಲ. ಸುಮಾರು ₹ 1,700 ಕೋಟಿ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.</p>.<p>ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೂಲಸೌಕರ್ಯ ಕೊರತೆ, ಪಿ.ಎಫ್. ಇತ್ಯರ್ಥ, ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.</p>.<p>ನಾಲ್ಕು ಸಾರಿಗೆ ನಿಗಮಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಸರ್ಕಾರಿ ನೌಕರರಿಗೆ ಮೂಲ ವೇತನವನ್ನು ತುಟ್ಟಿ ಭತ್ಯೆಯೊಂದಿಗೆ ವಿಲೀನಗೊಳಿಸಿ 2024ರಿಂದ ಹೊಸ ವೇತನ ಪರಿಷ್ಕರಣೆ ಮಾಡಿದೆ. ಅದರ ಪ್ರಕಾರ ಸಾರಿಗೆ ನಿಗಮದ ನೌಕರರಿಗೂ ಸರ್ಕಾರಿ ನೌಕರರ ವೇತನದಂತೆ ಮೂಲವೇತನಕ್ಕೆ ತುಟ್ಟಿಭತ್ಯೆ ವಿಲೀನಗೊಳಿಸಿ ನೀಡಬೇಕಿದೆ. ಇದರ ಮೊತ್ತ ಅಂದಾಜು ₹ 10 ಕೋಟಿ ಆಗಬಹುದು ಎಂದು ಹೇಳಿದ್ದಾರೆ.</p>.<p>ಬಿಎಂಟಿಸಿಯಲ್ಲೇ ಸುಮಾರು 1,631 ವಿದ್ಯುತ್ ಚಾಲಿತ ಬಸ್ಗಳಿದ್ದು, ಈ ಬಸ್ಗಳ ಕಂಪನಿಗಳಿಗೆ ಮೂರು ತಿಂಗಳಿನಿಂದ ₹200 ಕೋಟಿ ಬಿಲ್ ಪಾವತಿ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನೌಕರರ ಗ್ರಾಚ್ಯುಟಿ, ರಜೆ ನಗದೀಕರಣ ಬಾಕಿ ₹ 315 ಕೋಟಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>