ಕಥಾ ಸ್ಪರ್ಧೆಯ ಅಂತಿಮ ಸುತ್ತಿಗೆ 25 ಕಥೆಗಳು ಆಯ್ಕೆಯಾಗಿದ್ದವು. ಅಕ್ಷಯ ಪಂಡಿತ್ ಅವರ ‘ಖಾಲಿ ಕ್ಯಾನ್ವಸ್’ ಕಥೆ ದ್ವಿತೀಯ (₹ 25 ಸಾವಿರ ನಗದು) ಹಾಗೂ ವಿಕಾಸ್ ನೇಗಿಲೋಣಿ ಅವರ ‘ರುಕುಮಣಿ ರುಕುಮಣಿ ಶಾದಿ ಕೆ ಬಾದ್ ಕ್ಯಾ ಕ್ಯಾ ಹುವಾ’ ಕಥೆ ತೃತೀಯ ಸ್ಥಾನ (₹ 15 ಸಾವಿರ ನಗದು) ಪಡೆಯಿತು. ಶರತ್ ಭಟ್ ಸೇರಾಜೆ ಅವರ ‘3>2>1’, ಪೂರ್ಣಿಮಾ ಭಟ್ಟ ಅವರ ‘ಹಾಪ್ ಸರ್ಕಲ್ + ಹಾಪ್ ಸರ್ಕಲ್’, ಜಯರಾಮಚಾರಿ ಅವರ ‘ಯುಗಾದಿ ವಿಶೇಷಾಂಕ’, ದೀಪ್ತಿ ಭದ್ರಾವತಿ ಅವರ ‘ಸತ್ಯವೇಲು ಮತ್ತವನ ಸೊಳ್ಳೆ ಪುರಾಣ’ ಹಾಗೂ ವಿಜಯಶ್ರೀ ಎಂ. ಹಾಲಾಡಿ ಅವರ ‘ಉಮ್ಕಲ್ತಿ ಗುಡಿಯ ಸಾಕ್ಷಿಯಲ್ಲಿ’ ಕಥೆಗಳು ಸಮಾಧಾನಕರ ಬಹುಮಾನ (ತಲಾ ₹ 5 ಸಾವಿರ ನಗದು) ಪಡೆದವು.