ಸಮನ್ವಿತ ಪ್ರಕಾಶನ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿಸದ್ಯೋಜಾತ ಅವರ ‘ಮಾಗಧೇಯ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು. ‘ಹನುಮಂತನಿಗೆ ಎಲ್ಲ ರೀತಿಯ ಶಕ್ತಿಗಳಿದ್ದರೂ ಶಾಪದಿಂದಾಗಿ ಎಲ್ಲವನ್ನೂ ಮರೆತಿದ್ದ.ಒಬ್ಬ ಜಾಂಬವಂತ ಬಂದು ಹನುಮಂತನಿಗೆ ಶಕ್ತಿಯ ಪರಿಚಯ ಮಾಡಿಸಬೇಕಾಯಿತು. ಅದೇ ರೀತಿ, ಭಾರತೀಯರು ನಮ್ಮದನ್ನು ಮರೆತಿದ್ದಾರೆ.ಥಾಮಸ್ ಮೆಕಾಲೆ ತನ್ನ ಶಿಕ್ಷಣ ಪದ್ಧತಿಯ ಮೂಲಕ ಇಲ್ಲಿನ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದ. ನಂತರ ಬ್ರಿಟಿಷರು ಇಲ್ಲಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಇತಿಹಾಸ ತಿರುಚಿದರು’ ಎಂದು ಬೇಸರ ವ್ಯಕ್ತಪಡಿಸಿದರು.