ವಿಮರ್ಶಕ ಎಸ್.ದಿವಾಕರ್ ಮಾತನಾಡಿ, ‘ಹಾಸ್ಯ ಸಾಹಿತ್ಯದ ವಿಶ್ಲೇಷಣೆ ಅಸಾಧ್ಯ. ಅದು ಗಾಂಭೀರ್ಯದ ತಳಹದಿಯ, ವಾಸ್ತವ ಆಧರಿತವಾಗಿರುವುದರಿಂದ ವಿಶ್ಲೇಷಣೆ ಅಸಾಧ್ಯವಾಗುತ್ತದೆ. ವ್ಯಂಗ್ಯ ಚಿತ್ರ ಸಾಮಾಜಿಕ ವಿಮರ್ಶೆಯ ಆಯಾಮವಾಗಿದ್ದು, ಸಾಕಷ್ಟು ಪರ್ಯಾಯಗಳನ್ನು ಒಳಗೊಂಡಿರುತ್ತದೆ. ಹಾಸ್ಯ ಸಾಹಿತ್ಯದ ಓದುಗುರು ಇಲ್ಲ ಎಂಬ ಕಾರಣಕ್ಕೆ ಪ್ರಕಾಶಕರು ಮುದ್ರಣಕ್ಕೆ ಮುಂದಾಗುತ್ತಿಲ್ಲ. ಬೆರಳೆಣಿಕೆಯಷ್ಟು ಲೇಖಕರ ಬರಹಗಳಿಗೆ ಮಾತ್ರ ಮುದ್ರಣ ಭಾಗ್ಯ ಸಿಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂದರು.