ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬ್ರಾಹ್ಮಣರನ್ನು ಪರಿಗಣಿಸದೇ ಜಾತಿ ಜನಗಣತಿ: ಬ್ರಾಹ್ಮಣ ಮಹಾ ಸಮ್ಮೇಳನ ಆರೋಪ

ವೈಜ್ಞಾನಿಕ ಗಣತಿಗೆ ಆಗ್ರಹ; ಇಡಬ್ಲ್ಯುಎಸ್ ಮೀಸಲಾತಿ ಜಾರಿಗೆ ಒತ್ತಾಯ
Published : 19 ಜನವರಿ 2025, 23:30 IST
Last Updated : 19 ಜನವರಿ 2025, 23:30 IST
ಫಾಲೋ ಮಾಡಿ
Comments
ಇತಿಹಾಸದ ಪುಟ ತಿರುವಿದರೆ ಬ್ರಾಹ್ಮಣರು ದೇಶಕ್ಕೆ ನೀಡಿದ ಕೊಡುಗೆಗಳು ತಿಳಿಯಲಿವೆ. ಎಲ್ಲ ಸಮುದಾಯವನ್ನು ಪ್ರೀತಿಸುತ್ತಾ ಗೌರವಿಸುತ್ತಾ ಹೆಜ್ಜೆ ಹಾಕಬೇಕು.
–ಕೃಷ್ಣ ಎಸ್. ದೀಕ್ಷಿತ್, ಹೈಕೋರ್ಟ್ ನ್ಯಾಯಮೂರ್ತಿ
ಬ್ರಾಹ್ಮಣ ಎನ್ನುವುದು ಜಾತಿ ಸೂಚಕ ಪದವಾಗಿರದೆ ವರ್ಣ ಸೂಚಕ ಪದವಾಗಿದೆ. ಶಾಸ್ತ್ರ ವಾಕ್ಯಕ್ಕೆ ವಿರುದ್ಧವಾದದ್ದು ಜಾತಿ. ಆದ್ದರಿಂದ ಜಾತಿ ಬದಲು ಸಮುದಾಯವೆಂದು ಗುರುತಿಸಿಕೊಳ್ಳಿ.
–ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠ
‘ಸಂತಾನ ಬೇಡವಾದರೆ ಸನ್ಯಾಸಿಯಾಗಿ’
‘ಯಾವುದೋ ಸಣ್ಣ ಸಣ್ಣ ಲಾಭಗಳಿಗಾಗಿ ಸಂತಾನದ ಬಗ್ಗೆ ಬ್ರಾಹ್ಮಣ ಸಮುದಾಯದವರು ನಿರುತ್ಸಾಹ ತೋರುತ್ತಿದ್ದಾರೆ. ಸಂತಾನ ಬೇಡವಾದರೆ ಸಂಸಾರ ನಡೆಸದೆ ಸಮಾಜದ ಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ಪಡೆಯಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು ‘ಸಂತಾನ ಪಡೆಯದಿರುವುದು ಮತ್ತು ಸಂಸ್ಕಾರ ಹೀನತೆ ಬ್ರಾಹ್ಮಣ ಸಮುದಾಯದ ಪ್ರಮುಖ ಸಮಸ್ಯೆಗಳಾಗಿವೆ. ಸದ್ಯದ ಸ್ಥಿತಿಯಲ್ಲಿ ಸಂತಾನ ಸಂಸ್ಕಾರವನ್ನು ವೃದ್ಧಿಸಬೇಕಾದ ಅಗತ್ಯವಿದೆ.  ಸಂಸಾರಸ್ಥರು ಸಂತತಿ ಪಡೆದು ಸಮುದಾಯವನ್ನು ಬೆಳೆಸಬೇಕು. ಪಡೆದ ಸಂತತಿಗೆ ಸಂಸ್ಕಾರವನ್ನೂ ನೀಡಬೇಕು. ಸಂತಾನ ಬೇಡವೆಂದಾದಲ್ಲಿ ಸಂಸಾರವೂ ಬೇಡ’ ಎಂದು ಹೇಳಿದರು. ‘ಬ್ರಾಹ್ಮಣರಲ್ಲಿ ಯಾರೇ ಹೆಚ್ಚಿನ ಸಂತತಿ ಪಡೆದರೂ ಅವರ ಮಕ್ಕಳಿಗೆ ಆಶೀರ್ವಾದ ಆಶ್ರಯವನ್ನು ಮಠ ನೀಡಲಿದೆ. ಶಿಕ್ಷಣ ಉದ್ಯೋಗಕ್ಕೂ ನೆರವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT