<p class="Briefhead">ರಾಜಧಾನಿಗೆ ‘ಬ್ರ್ಯಾಂಡ್ ಬೆಂಗಳೂರು’ ಹೆಗ್ಗಳಿಕೆ ಮರಳಿ ತರಲುಏನು ಮಾಡಬೇಕು? ‘ಪ್ರಜಾವಾಣಿ’ ಓದುಗರು ನೀಡಿರುವ ಸಲಹೆಗಳು ಇಲ್ಲಿವೆ. ನಿಮ್ಮ ಸಲಹೆಯನ್ನು95133 22930 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ.</p>.<p class="Briefhead"><strong>‘ಪಾರದರ್ಶಕ ಆಡಳಿತ ಬರಲಿ’</strong></p>.<p>ಪಾಲಿಕೆಯ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಬೇಕು.ಪ್ಲಾಸ್ಟಿಕ್ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಕಸ ವಿಲೇವಾರಿ, ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ಪರಿಶೀಲನೆ ಮಾಡಿ, ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು.</p>.<p><em>-ಶಿವಾನಂದ, <span class="Designate">ಜ್ಞಾನಜ್ಯೋತಿ ನಗರ</span></em></p>.<p class="Briefhead"><strong>‘ಗಿಡಗಳ ಬೆಳೆಸಿ’</strong></p>.<p>ಉದ್ಯಾನನಗರ ಎಂದು ಜನಪ್ರಿಯವಾಗಿದ್ದ ಬೆಂಗಳೂರಿನ ಸೌಂದರ್ಯ ಮರುಕಳಿಸಬೇಕಾದರೆ ಗಿಡಗಳನ್ನು ಬೆಳೆಸಬೇಕು. ಅದೇ ರೀತಿ, ನಗರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ನೆಪದಲ್ಲಿ ಮರಗಳಿಗೆ ಕೊಡಲಿಯೇಟು ಹಾಕಬಾರದು.</p>.<p><em>–ದಿವ್ಯಶ್ರೀ ವಿ., <span class="Designate">ಬೆಂಗಳೂರು</span></em></p>.<p class="Briefhead"><strong>‘ಗುಣಮಟ್ಟದ ರಸ್ತೆ ನಿರ್ಮಿಸಿ’</strong></p>.<p>ನಗರದ ರಸ್ತೆ ಸಮಸ್ಯೆಯಿಂದ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಗುಣಮಟ್ಟದ ರಸ್ತೆಯನ್ನು ನಿರ್ಮಿಸುವ ಜತೆಗೆ ಪಾದಚಾರಿ ಪಥವನ್ನೂ ನಿರ್ಮಿಸಬೇಕು. ವಾಹನ ನಿಲುಗಡೆ ಸಮಸ್ಯೆಗೆ ಸಹ ಪರಿಹಾರ ಒದಗಿಸಬೇಕು.</p>.<p><em>–ಎಂ. ಸುರೇಶ್, <span class="Designate">ವಿ.ವಿ ಪುರ</span></em></p>.<p class="Briefhead"><strong>‘ತಜ್ಞರ ಸಮಿತಿ ರಚಿಸಿ’</strong></p>.<p>ನಗರದ ಸಮಗ್ರ ಅಭಿವೃದ್ಧಿಗೆ ತಜ್ಞರ ಸಮಿತಿ ರಚಿಸಿ, ಅವರ ಸಲಹೆ ಅನುಸಾರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಪರಿಸರಕ್ಕೆ ಮಾರಕವಾಗುವ ಅಭಿವೃದ್ಧಿಗಳು ಬೇಕಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇರಲಿ.</p>.<p><em>–ಎಂ. ವಿಜಯ್, <span class="Designate">ಬೇಂದ್ರೆ ನಗರ</span></em></p>.<p class="Briefhead"><strong>‘ರಸ್ತೆ ಗುಂಡಿ ಸಮಸ್ಯೆ ನಿವಾರಿಸಿ’</strong></p>.<p>ಕಾವೇರಿ ನೀರು, ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಉತ್ತಮ ರಸ್ತೆಗಳು ಹಾಳಾಗುತ್ತಿವೆ. ಸೂಕ್ತ ಯೋಜನೆ ರೂಪಿಸಿ, ಕಾಮಗಾರಿಗಳನ್ನು ಶೀಘ್ರ ಪೂರ್ತಿಗೊಳಿಸಬೇಕು.</p>.<p><em>–ಶಿವಶಂಕರ ಎಸ್.,<span class="Designate">ಯಲಹಂಕ</span></em></p>.<p class="Briefhead"><strong>‘ಸ್ವಚ್ಛತೆಗೆ ಆದ್ಯತೆ ನೀಡಿ’</strong></p>.<p>ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆಯು ತೀವ್ರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹಾಗಾಗಿ, ಸ್ವಚ್ಛತೆಗೆ ಆದ್ಯತೆ ನೀಡಲೇಬೇಕು, ಕಸ ವಿಲೇವಾರಿಗೆ ತ್ವರಿತಗತಿಯಲ್ಲಿ ಮತ್ತು ಸಮರ್ಪಕ ರೀತಿಯಲ್ಲಿ ಪರಿಹಾರವನ್ನು ಬಿಬಿಎಂಪಿ ಕಂಡುಕೊಳ್ಳಬೇಕು. ಈ ಮೂಲಕಸ್ವಚ್ಛನಗರ ಪಟ್ಟಿಯಲ್ಲಿ ಬೆಂಗಳೂರು ಮಹಾ ನಗರ ಅಗ್ರಸ್ಥಾನದಲ್ಲಿರುವಂತೆಯೇ ಮಾಡಿ.</p>.<p><em>-ವಿಠಲ್ ಕೃಷ್ಣ ಪಿ.,<span class="Designate">ರಾಜಾಜಿನಗರ</span></em></p>.<p><strong>‘ಕನ್ನಡ ಕಟ್ಟುವ ಕೆಲಸ ಮಾಡಿ’</strong></p>.<p>ಬೆಂಗಳೂರು ಮಹಾ ನಗರದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಕನ್ನಡಿಗರೇ ನಿರುದ್ಯೋಗಿಗಳಾಗುತ್ತಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಮಾತನಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಭಾಷಿಗರ ದಬ್ಬಾಳಿಕೆಯು ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಕನ್ನಡಿಗರಿಗೆ ಮತ್ತು ಕನ್ನಡ ಕಟ್ಟುವ ಕೆಲಸಕ್ಕೆ ಮೊದಲು ಆದ್ಯತೆ ನೀಡಿ.</p>.<p><em>–ನಾಗರಾಜ ಗರಗ್,<span class="Designate">ವಿಜಯನಗರ</span></em></p>.<p class="Briefhead"><strong>‘ಸಂಸ್ಕೃತಿಗೆ ಆದ್ಯತೆ ನೀಡಿ’</strong></p>.<p>ಅಭಿವೃದ್ಧಿಯ ನೆಪದಲ್ಲಿ ನಗರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಪರಂಪರೆ ಹಾಗೂ ಪರಿಸರಕ್ಕೆ ಚ್ಯುತಿ ತರುವ ಕೆಲಸ ಆಗಬಾರದು. ಪ್ರತಿ ವಾರ್ಡ್ನಲ್ಲಿಯೂ ವಿವಿಧ ವಯೋಮಾನದವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಕುಂದುಕೊರತೆಗಳನ್ನು ನಿವಾರಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕು. ಇದು ನಿರಂತರವಾಗಿ ನಡೆಯುವಂತೆ</p>.<p><em>–ಚಲಚತಿ ಭಾರದ್ವಾಜ್, <span class="Designate">ಹೆಬ್ಬಗೋಡಿ</span></em></p>.<p class="Briefhead"><strong>‘ಚರಂಡಿಗಳು ಸ್ಚಚ್ಛವಾಗಲಿ’</strong></p>.<p>ನಗರದ ಎಲ್ಲ ಚರಂಡಿಗಳನ್ನು ಆದ್ಯತೆಯ ಮೇಲೆ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಬೇಕು. ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.</p>.<p><em>–ಸಿದ್ದರಾಜು ಎನ್.ಆರ್.,<span class="Designate">ನಾಗದೇವನಹಳ್ಳಿ</span></em></p>.<p class="Briefhead"><strong>‘ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿ’</strong></p>.<p>ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅದೇ ರೀತಿ, ರಸ್ತೆಗಳಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಪ್ಲಾಸ್ಟಿಕ್ನಿಂದ ಬೆಂಗಳೂರು ನಗರ ನಲುಗಿ ಹೋಗಿದೆ. ಜನಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಜನಾಭಿಪ್ರಾಯದ ಮೇರೆಗೆ ಕೈಗೊಳ್ಳಬೇಕು.</p>.<p><em>-ಧರ್ಮಾನಂದ ಶಿರ್ವ, <span class="Designate">ವಿಜಯನಗರ</span></em></p>.<p class="Briefhead"><strong>‘ವಾಟ್ಸ್ಆ್ಯಪ್ ಗ್ರೂಪ್ ರಚಿಸಿ’</strong></p>.<p>ನಗರದಾದ್ಯಂತ ರಸ್ತೆಗುಂಡಿಗಳ ಸಮಸ್ಯೆಯು ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕವಾದ ವಾಟ್ಸ್ಆ್ಯಪ್ ಗ್ರೂಪ್ ರಚಿಸಬೇಕು. ಅದರ ನಿರ್ವಹಣೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಿದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ.ಪ್ರಗತಿಯ ವರದಿಯನ್ನು ವಾರಕ್ಕೆ ಒಂದು ಬಾರಿ ಪ್ರತಿ ವಾರ್ಡಿನಿಂದ ಪಡೆಯಬೇಕು. ಈ ಸಮಸ್ಯೆ ಮೇಲೆ ನಿರಂತರವಾಗಿ ನಿಗಾವಹಿಸಬೇಕು.</p>.<p><em>–ಸಾಗರ ಹೊಳ್ಳ, ಜೆ.ಪಿ. ನಗರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ರಾಜಧಾನಿಗೆ ‘ಬ್ರ್ಯಾಂಡ್ ಬೆಂಗಳೂರು’ ಹೆಗ್ಗಳಿಕೆ ಮರಳಿ ತರಲುಏನು ಮಾಡಬೇಕು? ‘ಪ್ರಜಾವಾಣಿ’ ಓದುಗರು ನೀಡಿರುವ ಸಲಹೆಗಳು ಇಲ್ಲಿವೆ. ನಿಮ್ಮ ಸಲಹೆಯನ್ನು95133 22930 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ.</p>.<p class="Briefhead"><strong>‘ಪಾರದರ್ಶಕ ಆಡಳಿತ ಬರಲಿ’</strong></p>.<p>ಪಾಲಿಕೆಯ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಬೇಕು.ಪ್ಲಾಸ್ಟಿಕ್ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಕಸ ವಿಲೇವಾರಿ, ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ಪರಿಶೀಲನೆ ಮಾಡಿ, ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು.</p>.<p><em>-ಶಿವಾನಂದ, <span class="Designate">ಜ್ಞಾನಜ್ಯೋತಿ ನಗರ</span></em></p>.<p class="Briefhead"><strong>‘ಗಿಡಗಳ ಬೆಳೆಸಿ’</strong></p>.<p>ಉದ್ಯಾನನಗರ ಎಂದು ಜನಪ್ರಿಯವಾಗಿದ್ದ ಬೆಂಗಳೂರಿನ ಸೌಂದರ್ಯ ಮರುಕಳಿಸಬೇಕಾದರೆ ಗಿಡಗಳನ್ನು ಬೆಳೆಸಬೇಕು. ಅದೇ ರೀತಿ, ನಗರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ನೆಪದಲ್ಲಿ ಮರಗಳಿಗೆ ಕೊಡಲಿಯೇಟು ಹಾಕಬಾರದು.</p>.<p><em>–ದಿವ್ಯಶ್ರೀ ವಿ., <span class="Designate">ಬೆಂಗಳೂರು</span></em></p>.<p class="Briefhead"><strong>‘ಗುಣಮಟ್ಟದ ರಸ್ತೆ ನಿರ್ಮಿಸಿ’</strong></p>.<p>ನಗರದ ರಸ್ತೆ ಸಮಸ್ಯೆಯಿಂದ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಗುಣಮಟ್ಟದ ರಸ್ತೆಯನ್ನು ನಿರ್ಮಿಸುವ ಜತೆಗೆ ಪಾದಚಾರಿ ಪಥವನ್ನೂ ನಿರ್ಮಿಸಬೇಕು. ವಾಹನ ನಿಲುಗಡೆ ಸಮಸ್ಯೆಗೆ ಸಹ ಪರಿಹಾರ ಒದಗಿಸಬೇಕು.</p>.<p><em>–ಎಂ. ಸುರೇಶ್, <span class="Designate">ವಿ.ವಿ ಪುರ</span></em></p>.<p class="Briefhead"><strong>‘ತಜ್ಞರ ಸಮಿತಿ ರಚಿಸಿ’</strong></p>.<p>ನಗರದ ಸಮಗ್ರ ಅಭಿವೃದ್ಧಿಗೆ ತಜ್ಞರ ಸಮಿತಿ ರಚಿಸಿ, ಅವರ ಸಲಹೆ ಅನುಸಾರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಪರಿಸರಕ್ಕೆ ಮಾರಕವಾಗುವ ಅಭಿವೃದ್ಧಿಗಳು ಬೇಕಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇರಲಿ.</p>.<p><em>–ಎಂ. ವಿಜಯ್, <span class="Designate">ಬೇಂದ್ರೆ ನಗರ</span></em></p>.<p class="Briefhead"><strong>‘ರಸ್ತೆ ಗುಂಡಿ ಸಮಸ್ಯೆ ನಿವಾರಿಸಿ’</strong></p>.<p>ಕಾವೇರಿ ನೀರು, ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಉತ್ತಮ ರಸ್ತೆಗಳು ಹಾಳಾಗುತ್ತಿವೆ. ಸೂಕ್ತ ಯೋಜನೆ ರೂಪಿಸಿ, ಕಾಮಗಾರಿಗಳನ್ನು ಶೀಘ್ರ ಪೂರ್ತಿಗೊಳಿಸಬೇಕು.</p>.<p><em>–ಶಿವಶಂಕರ ಎಸ್.,<span class="Designate">ಯಲಹಂಕ</span></em></p>.<p class="Briefhead"><strong>‘ಸ್ವಚ್ಛತೆಗೆ ಆದ್ಯತೆ ನೀಡಿ’</strong></p>.<p>ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆಯು ತೀವ್ರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹಾಗಾಗಿ, ಸ್ವಚ್ಛತೆಗೆ ಆದ್ಯತೆ ನೀಡಲೇಬೇಕು, ಕಸ ವಿಲೇವಾರಿಗೆ ತ್ವರಿತಗತಿಯಲ್ಲಿ ಮತ್ತು ಸಮರ್ಪಕ ರೀತಿಯಲ್ಲಿ ಪರಿಹಾರವನ್ನು ಬಿಬಿಎಂಪಿ ಕಂಡುಕೊಳ್ಳಬೇಕು. ಈ ಮೂಲಕಸ್ವಚ್ಛನಗರ ಪಟ್ಟಿಯಲ್ಲಿ ಬೆಂಗಳೂರು ಮಹಾ ನಗರ ಅಗ್ರಸ್ಥಾನದಲ್ಲಿರುವಂತೆಯೇ ಮಾಡಿ.</p>.<p><em>-ವಿಠಲ್ ಕೃಷ್ಣ ಪಿ.,<span class="Designate">ರಾಜಾಜಿನಗರ</span></em></p>.<p><strong>‘ಕನ್ನಡ ಕಟ್ಟುವ ಕೆಲಸ ಮಾಡಿ’</strong></p>.<p>ಬೆಂಗಳೂರು ಮಹಾ ನಗರದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಕನ್ನಡಿಗರೇ ನಿರುದ್ಯೋಗಿಗಳಾಗುತ್ತಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಮಾತನಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಭಾಷಿಗರ ದಬ್ಬಾಳಿಕೆಯು ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಕನ್ನಡಿಗರಿಗೆ ಮತ್ತು ಕನ್ನಡ ಕಟ್ಟುವ ಕೆಲಸಕ್ಕೆ ಮೊದಲು ಆದ್ಯತೆ ನೀಡಿ.</p>.<p><em>–ನಾಗರಾಜ ಗರಗ್,<span class="Designate">ವಿಜಯನಗರ</span></em></p>.<p class="Briefhead"><strong>‘ಸಂಸ್ಕೃತಿಗೆ ಆದ್ಯತೆ ನೀಡಿ’</strong></p>.<p>ಅಭಿವೃದ್ಧಿಯ ನೆಪದಲ್ಲಿ ನಗರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಪರಂಪರೆ ಹಾಗೂ ಪರಿಸರಕ್ಕೆ ಚ್ಯುತಿ ತರುವ ಕೆಲಸ ಆಗಬಾರದು. ಪ್ರತಿ ವಾರ್ಡ್ನಲ್ಲಿಯೂ ವಿವಿಧ ವಯೋಮಾನದವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಕುಂದುಕೊರತೆಗಳನ್ನು ನಿವಾರಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕು. ಇದು ನಿರಂತರವಾಗಿ ನಡೆಯುವಂತೆ</p>.<p><em>–ಚಲಚತಿ ಭಾರದ್ವಾಜ್, <span class="Designate">ಹೆಬ್ಬಗೋಡಿ</span></em></p>.<p class="Briefhead"><strong>‘ಚರಂಡಿಗಳು ಸ್ಚಚ್ಛವಾಗಲಿ’</strong></p>.<p>ನಗರದ ಎಲ್ಲ ಚರಂಡಿಗಳನ್ನು ಆದ್ಯತೆಯ ಮೇಲೆ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಬೇಕು. ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.</p>.<p><em>–ಸಿದ್ದರಾಜು ಎನ್.ಆರ್.,<span class="Designate">ನಾಗದೇವನಹಳ್ಳಿ</span></em></p>.<p class="Briefhead"><strong>‘ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿ’</strong></p>.<p>ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅದೇ ರೀತಿ, ರಸ್ತೆಗಳಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಪ್ಲಾಸ್ಟಿಕ್ನಿಂದ ಬೆಂಗಳೂರು ನಗರ ನಲುಗಿ ಹೋಗಿದೆ. ಜನಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಜನಾಭಿಪ್ರಾಯದ ಮೇರೆಗೆ ಕೈಗೊಳ್ಳಬೇಕು.</p>.<p><em>-ಧರ್ಮಾನಂದ ಶಿರ್ವ, <span class="Designate">ವಿಜಯನಗರ</span></em></p>.<p class="Briefhead"><strong>‘ವಾಟ್ಸ್ಆ್ಯಪ್ ಗ್ರೂಪ್ ರಚಿಸಿ’</strong></p>.<p>ನಗರದಾದ್ಯಂತ ರಸ್ತೆಗುಂಡಿಗಳ ಸಮಸ್ಯೆಯು ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕವಾದ ವಾಟ್ಸ್ಆ್ಯಪ್ ಗ್ರೂಪ್ ರಚಿಸಬೇಕು. ಅದರ ನಿರ್ವಹಣೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಿದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ.ಪ್ರಗತಿಯ ವರದಿಯನ್ನು ವಾರಕ್ಕೆ ಒಂದು ಬಾರಿ ಪ್ರತಿ ವಾರ್ಡಿನಿಂದ ಪಡೆಯಬೇಕು. ಈ ಸಮಸ್ಯೆ ಮೇಲೆ ನಿರಂತರವಾಗಿ ನಿಗಾವಹಿಸಬೇಕು.</p>.<p><em>–ಸಾಗರ ಹೊಳ್ಳ, ಜೆ.ಪಿ. ನಗರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>