‘ನಾನು ಮುಖ್ಯಮಂತ್ರಿ ಆಗಿದ್ದಾಗ ಗಣಿ ಮಾಲೀಕರಿಂದ ಹಣ ಕೊಡಿಸಿ19 ಶಾಸಕರನ್ನು ರಾಜಭವನಕ್ಕೆ ಕಳಿಸಿ ಅಲ್ಲಿಂದ ಗೋವಾ ರೆಸಾರ್ಟ್ನಲ್ಲಿ ಇರಿಸಿದಿರಿ. ಬಳಿಕ ಅವರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದು ನೈತಿಕತೆಯೇ, ಕಾನೂನು ಬಾಹಿರವಾಗಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದ್ದನ್ನು ಮರೆತಿದ್ದೀರಾ’ ಎಂದರು. ‘ಸದನದಲ್ಲಿ ಸಮಯಕಳೆಯುತ್ತಿರುವುದನ್ನು ನೋಡಿದಾಗ ನೀವು ಕುರ್ಚಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದೀರಾ ಎಂಬುದು ಜಗಜ್ಜಾಹೀರಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.