ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಶಿವರಾಜ್ ಎಂ.ಸಿ., ‘ಮಂಡಳಿ ಅಥವಾ ನಿಗಮ ರಚಿಸುವ ಮೂಲಕ ರಾಜ್ಯದ ಐತಿಹಾಸಿಕ ಶಿಲಾಶಾಸನಗಳು, ಸ್ಮಾರಕಗಳು ಹಾಗೂ ಬೌದ್ಧ ಸ್ಥೂಪಗಳನ್ನು ಸಂರಕ್ಷಣೆ ಮಾಡಬೇಕು. ಆಸಕ್ತರು ಬೌದ್ಧ ಧರ್ಮದ ಅನುಯಾಯಿಗಳಾದ ಬಳಿಕ ಅಧಿಕೃತವಾಗಿ ದೃಢಪಡಿಸಿಕೊಳ್ಳಲು ಬೌದ್ಧ ಧರ್ಮದ ಪ್ರತ್ಯೇಕ ಕಾಲಂ ನೀಡಬೇಕು. ಬುದ್ಧ ಜನ್ಮದಿನದಂದು ಜಯಂತಿ ಆಚರಿಸಿ, ಸರ್ಕಾರಿ ರಜೆ ಘೋಷಿಸಬೇಕು’ ಎಂದು ಆಗ್ರಹಿಸಿದರು.