ಪ್ರೊ. ಆರಾಧ್ಯ ಅವರು ‘ನ್ಯಾಯಾಂಗ ವೀರಶೈವ–ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಿತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಗರಂ ಆದ ನಾಗಮೋಹನ್ ದಾಸ್ ಅವರು, ‘ಮುಸಲ್ಮಾನರು, ಪಾರ್ಸಿ, ಕ್ರೈಸ್ತ ಧರ್ಮಗಳಿಗೆ ಹಲವು ಹಿಂದೂಗಳು ಮತಾಂತರಗೊಂಡಿದ್ದಾರೆ. ಇದರಿಂದ ಧರ್ಮಗಳು ಪ್ರತ್ಯೇಕ ಆಗಲಿಲ್ಲವೇ? ಆಗ ಏಕೆ ಸುಮ್ಮನಿದ್ದಿರಿ?’ ಎಂದು ಪ್ರಶ್ನೆ ಮಾಡಿದರು.