<p><strong>ಬೆಂಗಳೂರು:</strong> ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದರು.</p>.<p>ಅಧಿಕಾರಿಗಳು ಹಿಟಾಚಿಯ ನೆರವಿನಿಂದ ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.</p>.<p>ಮನೆಯಲ್ಲಿದ್ದ ಸಾಮಾನು ಸರಂಜಾಮು, ಬಟ್ಟೆ, ಪೀಠೋಪಕರಣಗಳು ಹಾಗೂ ಕಾಗದ ಪತ್ರಗಳನ್ನು ತೆಗೆದುಕೊಳ್ಳಲು ಅವರಿಗೆ ಆಗಲಿಲ್ಲ. ಕಟ್ಟಡದ ತಾರಸಿ ಹಾಗೂ ಕಾರಿಡಾರ್ನಲ್ಲಿ ಒಣಗಿಸಿದ್ದ ಬಟ್ಟೆಗಳು ಹಾಗೇ ನೇತಾಡುತ್ತಿದ್ದವು.</p>.<p>ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿದ್ದರು. ಸ್ಥಳೀಯರನ್ನು ದೂರ ಕಳಿಸುವ ಕಾರ್ಯದಲ್ಲೂ ಮಗ್ನರಾಗಿದ್ದರು.</p>.<p>ಹಿಟಾಚಿ ಸಹಾಯದಿಂದ ಬಹಳ ಯೋಜನಾಬದ್ಧವಾಗಿ ಗೋಡೆಗಳನ್ನು ಕೆಡವಿದ ಅಧಿಕಾರಿಗಳು ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗದ ಹಾಗೆ ಕಟ್ಟಡವನ್ನು ಎಡಭಾಗಕ್ಕೆ ಬೀಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/bengaluru-city/building-basement-collapsed-in-kamalanagar-bengaluru-875232.html" target="_blank">ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದರು.</p>.<p>ಅಧಿಕಾರಿಗಳು ಹಿಟಾಚಿಯ ನೆರವಿನಿಂದ ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.</p>.<p>ಮನೆಯಲ್ಲಿದ್ದ ಸಾಮಾನು ಸರಂಜಾಮು, ಬಟ್ಟೆ, ಪೀಠೋಪಕರಣಗಳು ಹಾಗೂ ಕಾಗದ ಪತ್ರಗಳನ್ನು ತೆಗೆದುಕೊಳ್ಳಲು ಅವರಿಗೆ ಆಗಲಿಲ್ಲ. ಕಟ್ಟಡದ ತಾರಸಿ ಹಾಗೂ ಕಾರಿಡಾರ್ನಲ್ಲಿ ಒಣಗಿಸಿದ್ದ ಬಟ್ಟೆಗಳು ಹಾಗೇ ನೇತಾಡುತ್ತಿದ್ದವು.</p>.<p>ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿದ್ದರು. ಸ್ಥಳೀಯರನ್ನು ದೂರ ಕಳಿಸುವ ಕಾರ್ಯದಲ್ಲೂ ಮಗ್ನರಾಗಿದ್ದರು.</p>.<p>ಹಿಟಾಚಿ ಸಹಾಯದಿಂದ ಬಹಳ ಯೋಜನಾಬದ್ಧವಾಗಿ ಗೋಡೆಗಳನ್ನು ಕೆಡವಿದ ಅಧಿಕಾರಿಗಳು ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗದ ಹಾಗೆ ಕಟ್ಟಡವನ್ನು ಎಡಭಾಗಕ್ಕೆ ಬೀಳಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/district/bengaluru-city/building-basement-collapsed-in-kamalanagar-bengaluru-875232.html" target="_blank">ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>