<p><strong>ಯಲಹಂಕ: </strong>ತಡವಾಗಿ ಕ್ಯಾನ್ಸರ್ ರೋಗ ಪತ್ತೆಯಾಗುವುದು ಹಾಗೂ ಒಂದೇ ಕೇಂದ್ರದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿಲ್ಲದಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಿನ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೆಡಿಕಲ್ ಆಂಕಾಲಜಿ ಲೀಡ್ ಕನ್ಸಲ್ಟೆಂಟ್ ಡಾ.ಪ್ರಸಾದ್ ನಾರಾಯಣನ್ ಹೇಳಿದರು.</p><p>ಯಲಹಂಕದಲ್ಲಿ ಆರಂಭಗೊಂಡಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಇಂದಿನ ಕ್ಯಾನ್ಸರ್ ಚಿಕಿತ್ಸೆ ರೋಗಕ್ಕೆ ಮಾತ್ರ ಸೀಮಿತವಾಗದೆ, ರೋಗಿಯ ಅಗತ್ಯಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಪ್ರಿಸಿಷನ್ ಆಂಕಾಲಜಿ, ಇಮ್ಯುನೋಥೆರಪಿ ಹಾಗೂ ಸುಧಾರಿತ ಚಿಕಿತ್ಸಾ ಮಾರ್ಗಸೂಚಿಗಳು ರಿಮಿಷನ್ ಪ್ರಮಾಣ ಮತ್ತು ದೀರ್ಘಕಾಲಿಕ ಬದುಕನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದರಿಂದ ರೋಗಿಗಳಲ್ಲಿ ಹೊಸ ನಿರೀಕ್ಷೆ ಮೂಡುತ್ತಿದೆ’ ಎಂದರು.</p><p>ಮೆಡಿಕಲ್ ಆಂಕಾಲಜಿ ಕನ್ಸಲ್ಟೆಂಟ್ ಡಾ.ಹರೀಶ್.ಪಿ ಮಾತನಾಡಿ, ‘ರೋಗನಿರ್ಣಯದಿಂದ ಹಿಡಿದು ಬದುಕಿನ ಮುಂದಿನ ಹಂತದವರೆಗೆ ವೈದ್ಯಕೀಯ ತಂಡವು ರೋಗಿಯೊಂದಿಗೆ ಜೊತೆಯಾಗಿ ನಡೆಯುತ್ತದೆ. ಇದರಿಂದ ಚಿಕಿತ್ಸೆಯ ಪಯಣ ಸುಲಭವಾಗುತ್ತದೆ’ ಎಂದರು.</p><p>ಕ್ಯಾನ್ಸರ್ ತಜ್ಞರಾದ ಡಾ.ಜಗನ್ನಾಥ್ ದೀಕ್ಷಿತ್, ಡಾ.ಏರನ್ ಫರ್ನಾಂಡಿಸ್, ಡಾ.ಜೋಸೆಫ್ ಮ್ಯಾಥ್ಯೂ, ಡಾ.ವಿಕ್ರಮ್ ಮೈಯ್ಯ, ಡಾ.ರಾಮ್ ಮೋಹನ್ ರೆಡ್ಡಿ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ತಡವಾಗಿ ಕ್ಯಾನ್ಸರ್ ರೋಗ ಪತ್ತೆಯಾಗುವುದು ಹಾಗೂ ಒಂದೇ ಕೇಂದ್ರದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿಲ್ಲದಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಿನ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೆಡಿಕಲ್ ಆಂಕಾಲಜಿ ಲೀಡ್ ಕನ್ಸಲ್ಟೆಂಟ್ ಡಾ.ಪ್ರಸಾದ್ ನಾರಾಯಣನ್ ಹೇಳಿದರು.</p><p>ಯಲಹಂಕದಲ್ಲಿ ಆರಂಭಗೊಂಡಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಇಂದಿನ ಕ್ಯಾನ್ಸರ್ ಚಿಕಿತ್ಸೆ ರೋಗಕ್ಕೆ ಮಾತ್ರ ಸೀಮಿತವಾಗದೆ, ರೋಗಿಯ ಅಗತ್ಯಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಪ್ರಿಸಿಷನ್ ಆಂಕಾಲಜಿ, ಇಮ್ಯುನೋಥೆರಪಿ ಹಾಗೂ ಸುಧಾರಿತ ಚಿಕಿತ್ಸಾ ಮಾರ್ಗಸೂಚಿಗಳು ರಿಮಿಷನ್ ಪ್ರಮಾಣ ಮತ್ತು ದೀರ್ಘಕಾಲಿಕ ಬದುಕನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದರಿಂದ ರೋಗಿಗಳಲ್ಲಿ ಹೊಸ ನಿರೀಕ್ಷೆ ಮೂಡುತ್ತಿದೆ’ ಎಂದರು.</p><p>ಮೆಡಿಕಲ್ ಆಂಕಾಲಜಿ ಕನ್ಸಲ್ಟೆಂಟ್ ಡಾ.ಹರೀಶ್.ಪಿ ಮಾತನಾಡಿ, ‘ರೋಗನಿರ್ಣಯದಿಂದ ಹಿಡಿದು ಬದುಕಿನ ಮುಂದಿನ ಹಂತದವರೆಗೆ ವೈದ್ಯಕೀಯ ತಂಡವು ರೋಗಿಯೊಂದಿಗೆ ಜೊತೆಯಾಗಿ ನಡೆಯುತ್ತದೆ. ಇದರಿಂದ ಚಿಕಿತ್ಸೆಯ ಪಯಣ ಸುಲಭವಾಗುತ್ತದೆ’ ಎಂದರು.</p><p>ಕ್ಯಾನ್ಸರ್ ತಜ್ಞರಾದ ಡಾ.ಜಗನ್ನಾಥ್ ದೀಕ್ಷಿತ್, ಡಾ.ಏರನ್ ಫರ್ನಾಂಡಿಸ್, ಡಾ.ಜೋಸೆಫ್ ಮ್ಯಾಥ್ಯೂ, ಡಾ.ವಿಕ್ರಮ್ ಮೈಯ್ಯ, ಡಾ.ರಾಮ್ ಮೋಹನ್ ರೆಡ್ಡಿ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>