‘ನಸುಕಿನ 4ರ ಸುಮಾರಿಗೆ ಆನಂದ್ ಅವರು ಕಾರು ತೆಗೆದುಕೊಂಡು ದೇವನಹಳ್ಳಿಯತ್ತ ಹೊರಟಿದ್ದರು. ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಕಾರು ಪಂಕ್ಚರ್ ಆಗಿತ್ತು. ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದ ಅವರು ಚಕ್ರಗಳ ಪರಿಶೀಲನೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲೇ ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಹೊರಟಿದ್ದ ಕಾರು ಆನಂದ್ ಅವರಿಗೆ ಗುದ್ದಿತ್ತು. ಅಪಘಾತ ನಡೆಸಿದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.