<p>ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸುಳ್ಳು ಹೇಳಿ ₹2.83 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕಾರು ಮಾರಾಟ ಮಾಡುವುದಾಗಿ ಹೇಳಿ ‘ಕ್ವಿಕರ್’ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದ ಮೋಹನ್ ಕಿಮ್ ಎಂಬಾತ, ₹2.83 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ರವಿಕಿರಣ್ ವಲ್ಲೂರು ಎಂಬುವರು ದೂರು ನೀಡಿದ್ದಾರೆ.</p>.<p>‘ಜಾಹೀರಾತು ನೋಡಿ ಮೋಹನ್ನನ್ನು ಸಂಪರ್ಕಿಸಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಆತ, ‘ನನ್ನ ಕಾರನ್ನು 4 ತಿಂಗಳಿನಿಂದ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದೇನೆ. ಕಸ್ಟಮ್ಸ್ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ. ಕೆಲ ಶುಲ್ಕಗಳನ್ನು ಪಾವತಿಸಿದರೆ ಕಾರು ಬಿಡುಗಡೆ ಮಾಡುತ್ತಾರೆ. ನೀವು ಶುಲ್ಕ ಭರಿಸಿದರೆ ಕಾರನ್ನೂ ನಿಮಗೇ ಮಾರುತ್ತೇನೆ’ ಎಂದು ಹೇಳಿದ್ದ’ ಎಂಬುದಾಗಿ ದೂರಿನಲ್ಲಿ ರವಿಕಿರಣ್ ತಿಳಿಸಿದ್ದಾರೆ.</p>.<p>‘ಕಸ್ಟಮ್ಸ್ ಅಧಿಕಾರಿ ಎಂಬುದಾಗಿ ಹೇಳಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ವಿವರ ನೀಡಿದ್ದ ಆರೋಪಿ, ಆ ಖಾತೆಗೆ ಹಣ ಜಮೆ ಮಾಡುವಂತೆ ಹೇಳಿದ್ದ. ಅದನ್ನು ನಂಬಿ ₹2.83 ಲಕ್ಷ ಹಾಕಿದ್ದೆ. ನಂತರ ಆರೋಪಿ, ಯಾವುದೇ ಕಾರು ನೀಡಿಲ್ಲ. ಹಣ ವಾಪಸು ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ದೂರಿದ್ದಾರೆ.</p>.<p>ಪೊಲೀಸರು, ‘ಮೋಹನ್ ಕಿಮ್ ನಕಲಿ ಹೆಸರು ಇಟ್ಟುಕೊಂಡು ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದರು.</p>.<p class="Briefhead"><strong>ಶಿಕ್ಷಕನಿಗೆ ವಂಚನೆ</strong></p>.<p>ಆ್ಯಕ್ಸಿಸ್ ಬ್ಯಾಂಕ್ನ ಪ್ರತಿನಿಧಿ ಸೋಗಿನಲ್ಲಿ ಶಿಕ್ಷಕ ಎನ್.ಮಹೇಶ್ ಎಂಬುವರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ಅವರ ಖಾತೆಯಿಂದ ₹ 67,900 ವರ್ಗಾಯಿಸಿಕೊಂಡು ವಂಚಿಸಿದ್ದಾರೆ.</p>.<p>ಈ ಸಂಬಂಧಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕ್ರೆಡಿಟ್ ಕಾರ್ಡ್ ಸ್ಥಗಿತವಾಗುವುದಾಗಿ ಹೇಳಿದ್ದ ಆರೋಪಿ, ನವೀಕರಣ ಮಾಡಲು ಕಾರ್ಡ್ ಮಾಹಿತಿ ಕೇಳಿದ್ದ. ಆತನ ಮಾತು ನಂಬಿ ಮಾಹಿತಿ ಹಂಚಿಕೊಂಡಿದ್ದೆ. ಅದಾದ ನಂತರ ಆರೋಪಿ, ಖಾತೆಯಿಂದ ₹ 67,900 ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ’ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.</p>.<p class="Briefhead">ಕ್ರೆಡಿಟ್ ಕಾರ್ಡ್ ವಂಚನೆ</p>.<p>ಎಸ್ಬಿಐ ಕ್ರೆಡಿಟ್ ಕಾರ್ಡ್ ಸ್ಥಗಿತವಾಗಿರುವುದಾಗಿ ಹೇಳಿ ಕೃಷ್ಣಪ್ರಸಾದ್ ಎಂಬುವರಿಗೆ ಕರೆ ಮಾಡಿದ್ದ ವಂಚಕರು, ನವೀಕರಣದ ನೆಪದಲ್ಲಿ ಕಾರ್ಡ್ ವಿವರ ಪಡೆದು ₹ 1.02 ಲಕ್ಷವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧಮಾರತ್ತಹಳ್ಳಿ ಠಾಣೆಗೆ ಕೃಷ್ಣಪ್ರಸಾದ್ ದೂರು ನೀಡಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ವೆಂಕಟರಾಮನ್ ಎಂಬುವರ ಖಾತೆಯಿಂದ ₹43,254 ಡ್ರಾ ಮಾಡಿಕೊಂಡು ವಂಚಿಸಲಾಗಿದೆ.‘ಆ್ಯಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಇದೆ. ಹಣ ವರ್ಗಾವಣೆ ಸಂಬಂಧ ಯಾವುದೇ ಒಟಿಪಿ (ಒನ್ ಟೈಂ ಪಾಸ್ವರ್ಡ್) ಬಂದಿಲ್ಲ. ಅಷ್ಟಾದರೂ ಖಾತೆಯಿಂದ ಹಣ ವರ್ಗಾವಣೆ ಆಗಿದೆ’ ಎಂದು ವೆಂಕಟರಾಮನ್ ದೂರಿದ್ದಾರೆ.</p>.<p class="Briefhead"><strong>ಟೇಬಲ್ ಮಾರಾಟಕ್ಕಿಟ್ಟು ₹ 64,800 ಕಳೆದುಕೊಂಡ</strong></p>.<p>ಕಬ್ಬಿಣದ ಟೇಬಲ್ ಮಾರಾಟ ಮಾಡುವುದಾಗಿ ‘ಒಎಲ್ಎಕ್ಸ್’ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಹರ್ಷಿತ್ ವರ್ಮ ಎಂಬುವರನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದ ಸಂಜಯ್ ಸಿಂಗ್ ಎಂಬಾತ, ಬ್ಯಾಂಕ್ ಖಾತೆಯಿಂದ ₹ 64,800 ವರ್ಗಾಯಿಸಿಕೊಂಡು ವಂಚಿಸಿದ್ದಾನೆ.</p>.<p>ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಭಾರತೀಯ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಕೆಲಸ ಮಾಡುವುದಾಗಿ ಹೇಳಿದ್ದ ಸಂಜಯ್ ಸಿಂಗ್, ಟೇಬಲ್ ಖರೀದಿಸುವುದಾಗಿ ತಿಳಿಸಿದ್ದ. ಹಣ ಜಮೆ ಮಾಡುವುದಾಗಿ ತಿಳಿಸಿ ಕ್ಯೂಆರ್ ಕೋಡ್ ಒಂದನ್ನು ವಾಟ್ಸ್ಆ್ಯಪ್ಗೆ ಕಳುಹಿಸಿದ್ದ’ ಎಂದು ಹರ್ಷಿತ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಕ್ಯೂಆರ್ ಕೋಡ್ ಅನ್ನು ಗೂಗಲ್ ಪೇ ಖಾತೆಯಲ್ಲಿ ಸ್ಕ್ಯಾನ್ ಮಾಡಿದ್ದೆ. ಅದಾದ ಕೆಲ ಕ್ಷಣದಲ್ಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ನಂತರ, ಖಾತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸುಳ್ಳು ಹೇಳಿ ₹2.83 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕಾರು ಮಾರಾಟ ಮಾಡುವುದಾಗಿ ಹೇಳಿ ‘ಕ್ವಿಕರ್’ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದ ಮೋಹನ್ ಕಿಮ್ ಎಂಬಾತ, ₹2.83 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ರವಿಕಿರಣ್ ವಲ್ಲೂರು ಎಂಬುವರು ದೂರು ನೀಡಿದ್ದಾರೆ.</p>.<p>‘ಜಾಹೀರಾತು ನೋಡಿ ಮೋಹನ್ನನ್ನು ಸಂಪರ್ಕಿಸಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಆತ, ‘ನನ್ನ ಕಾರನ್ನು 4 ತಿಂಗಳಿನಿಂದ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದೇನೆ. ಕಸ್ಟಮ್ಸ್ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ. ಕೆಲ ಶುಲ್ಕಗಳನ್ನು ಪಾವತಿಸಿದರೆ ಕಾರು ಬಿಡುಗಡೆ ಮಾಡುತ್ತಾರೆ. ನೀವು ಶುಲ್ಕ ಭರಿಸಿದರೆ ಕಾರನ್ನೂ ನಿಮಗೇ ಮಾರುತ್ತೇನೆ’ ಎಂದು ಹೇಳಿದ್ದ’ ಎಂಬುದಾಗಿ ದೂರಿನಲ್ಲಿ ರವಿಕಿರಣ್ ತಿಳಿಸಿದ್ದಾರೆ.</p>.<p>‘ಕಸ್ಟಮ್ಸ್ ಅಧಿಕಾರಿ ಎಂಬುದಾಗಿ ಹೇಳಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ವಿವರ ನೀಡಿದ್ದ ಆರೋಪಿ, ಆ ಖಾತೆಗೆ ಹಣ ಜಮೆ ಮಾಡುವಂತೆ ಹೇಳಿದ್ದ. ಅದನ್ನು ನಂಬಿ ₹2.83 ಲಕ್ಷ ಹಾಕಿದ್ದೆ. ನಂತರ ಆರೋಪಿ, ಯಾವುದೇ ಕಾರು ನೀಡಿಲ್ಲ. ಹಣ ವಾಪಸು ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ದೂರಿದ್ದಾರೆ.</p>.<p>ಪೊಲೀಸರು, ‘ಮೋಹನ್ ಕಿಮ್ ನಕಲಿ ಹೆಸರು ಇಟ್ಟುಕೊಂಡು ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದರು.</p>.<p class="Briefhead"><strong>ಶಿಕ್ಷಕನಿಗೆ ವಂಚನೆ</strong></p>.<p>ಆ್ಯಕ್ಸಿಸ್ ಬ್ಯಾಂಕ್ನ ಪ್ರತಿನಿಧಿ ಸೋಗಿನಲ್ಲಿ ಶಿಕ್ಷಕ ಎನ್.ಮಹೇಶ್ ಎಂಬುವರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ಅವರ ಖಾತೆಯಿಂದ ₹ 67,900 ವರ್ಗಾಯಿಸಿಕೊಂಡು ವಂಚಿಸಿದ್ದಾರೆ.</p>.<p>ಈ ಸಂಬಂಧಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕ್ರೆಡಿಟ್ ಕಾರ್ಡ್ ಸ್ಥಗಿತವಾಗುವುದಾಗಿ ಹೇಳಿದ್ದ ಆರೋಪಿ, ನವೀಕರಣ ಮಾಡಲು ಕಾರ್ಡ್ ಮಾಹಿತಿ ಕೇಳಿದ್ದ. ಆತನ ಮಾತು ನಂಬಿ ಮಾಹಿತಿ ಹಂಚಿಕೊಂಡಿದ್ದೆ. ಅದಾದ ನಂತರ ಆರೋಪಿ, ಖಾತೆಯಿಂದ ₹ 67,900 ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ’ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.</p>.<p class="Briefhead">ಕ್ರೆಡಿಟ್ ಕಾರ್ಡ್ ವಂಚನೆ</p>.<p>ಎಸ್ಬಿಐ ಕ್ರೆಡಿಟ್ ಕಾರ್ಡ್ ಸ್ಥಗಿತವಾಗಿರುವುದಾಗಿ ಹೇಳಿ ಕೃಷ್ಣಪ್ರಸಾದ್ ಎಂಬುವರಿಗೆ ಕರೆ ಮಾಡಿದ್ದ ವಂಚಕರು, ನವೀಕರಣದ ನೆಪದಲ್ಲಿ ಕಾರ್ಡ್ ವಿವರ ಪಡೆದು ₹ 1.02 ಲಕ್ಷವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧಮಾರತ್ತಹಳ್ಳಿ ಠಾಣೆಗೆ ಕೃಷ್ಣಪ್ರಸಾದ್ ದೂರು ನೀಡಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ವೆಂಕಟರಾಮನ್ ಎಂಬುವರ ಖಾತೆಯಿಂದ ₹43,254 ಡ್ರಾ ಮಾಡಿಕೊಂಡು ವಂಚಿಸಲಾಗಿದೆ.‘ಆ್ಯಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಇದೆ. ಹಣ ವರ್ಗಾವಣೆ ಸಂಬಂಧ ಯಾವುದೇ ಒಟಿಪಿ (ಒನ್ ಟೈಂ ಪಾಸ್ವರ್ಡ್) ಬಂದಿಲ್ಲ. ಅಷ್ಟಾದರೂ ಖಾತೆಯಿಂದ ಹಣ ವರ್ಗಾವಣೆ ಆಗಿದೆ’ ಎಂದು ವೆಂಕಟರಾಮನ್ ದೂರಿದ್ದಾರೆ.</p>.<p class="Briefhead"><strong>ಟೇಬಲ್ ಮಾರಾಟಕ್ಕಿಟ್ಟು ₹ 64,800 ಕಳೆದುಕೊಂಡ</strong></p>.<p>ಕಬ್ಬಿಣದ ಟೇಬಲ್ ಮಾರಾಟ ಮಾಡುವುದಾಗಿ ‘ಒಎಲ್ಎಕ್ಸ್’ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಹರ್ಷಿತ್ ವರ್ಮ ಎಂಬುವರನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದ ಸಂಜಯ್ ಸಿಂಗ್ ಎಂಬಾತ, ಬ್ಯಾಂಕ್ ಖಾತೆಯಿಂದ ₹ 64,800 ವರ್ಗಾಯಿಸಿಕೊಂಡು ವಂಚಿಸಿದ್ದಾನೆ.</p>.<p>ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಭಾರತೀಯ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಕೆಲಸ ಮಾಡುವುದಾಗಿ ಹೇಳಿದ್ದ ಸಂಜಯ್ ಸಿಂಗ್, ಟೇಬಲ್ ಖರೀದಿಸುವುದಾಗಿ ತಿಳಿಸಿದ್ದ. ಹಣ ಜಮೆ ಮಾಡುವುದಾಗಿ ತಿಳಿಸಿ ಕ್ಯೂಆರ್ ಕೋಡ್ ಒಂದನ್ನು ವಾಟ್ಸ್ಆ್ಯಪ್ಗೆ ಕಳುಹಿಸಿದ್ದ’ ಎಂದು ಹರ್ಷಿತ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಕ್ಯೂಆರ್ ಕೋಡ್ ಅನ್ನು ಗೂಗಲ್ ಪೇ ಖಾತೆಯಲ್ಲಿ ಸ್ಕ್ಯಾನ್ ಮಾಡಿದ್ದೆ. ಅದಾದ ಕೆಲ ಕ್ಷಣದಲ್ಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ನಂತರ, ಖಾತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>