ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ‘ರಾಜ್ಯದಲ್ಲಿ ಆ ಮೂರು ಜಾತಿಗಳ ಜನಸಂಖ್ಯೆ ಶೇ 30ರಷ್ಟಿದೆ. ಆದರೆ, ಹಿಂದುಳಿದ ವರ್ಗಗಳ ಸಮುದಾಯಗಳ ಜನಸಂಖ್ಯೆ ಶೇ 70ರಷ್ಟಿದೆ. ಅವರು ಹೋರಾಡುವುದಾದರೆ, ನಾವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನೀವೋ, ನಾವೋ ನೋಡಿಯೇ ಬಿಡೋಣ’ ಎಂದು ಸವಾಲು ಹಾಕಿದರು.