ಬೆಂಗಳೂರು: ಮಧುಮೇಹ ನಿವಾರಣೆ ಹಾಗೂ ಲೈಂಗಿಕ ಶಕ್ತಿ ವೃದ್ಧಿ ಹೆಸರಿನಲ್ಲಿ ನಕಲಿ ಔಷಧಿ ನೀಡಿ ವಂಚಿಸುತ್ತಿದ್ದಆರೋಪದಡಿಬೆಳಗಾವಿ ಜಿಲ್ಲೆಯ ಗೊಕಾಕ್ನ ದೀಪಕ್ ಸೇರಿದಂತೆ ನಾಲ್ವರನ್ನು ಇಲ್ಲಿಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಇತ್ತೀಚೆಗಷ್ಟೇ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜನರನ್ನು ವಂಚಿಸುವ ಉದ್ದೇಶದಿಂದಲೇ ನಗರಕ್ಕೆ ಬಂದಿದ್ದ ಆರೋಪಿಗಳು, ನಗರದಲ್ಲಿ ಕಚೇರಿ ಸಹ ತೆರೆದಿದ್ದರು. ನಿತ್ಯವೂ ಬೆಳಿಗ್ಗೆ ಉದ್ಯಾನ ಬಳಿ ಹೋಗು ತ್ತಿದ್ದ ಆರೋಪಿಗಳು, ವಾಯು ವಿಹಾರಕ್ಕೆ ಬರುತ್ತಿದ್ದವರನ್ನು ಪರಿಚಯಿಸಿಕೊಳ್ಳುತ್ತಿದ್ದರು.ಅವರ ಮಾತು ನಂಬಿದ್ದ ಕೆಲವರು ಕಚೇರಿಗೆ ಹೋಗಿದ್ದರು.
ಜಯನಗರ, ಬಸವನಗುಡಿ, ಬನಶಂಕರಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಹಲವರನ್ನು ವಂಚಿಸಿರುವ ಮಾಹಿತಿ ಇದೆ.