ಚಾಮರಾಜನಗರ ಜಿಲ್ಲೆಯಲ್ಲಿ ಪಾಷಾ ಅವಿತುಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಪತ್ತೆಗೆ ಶುಕ್ರವಾರ ರಾತ್ರಿವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುದ್ದಗುಂಟೆ ಪಾಳ್ಯದಲ್ಲಿ ಜ.7ರಂದು ಬಂಧಿತರಾದ ಮೂವರು ಶಂಕಿತರು ಸದಸ್ಯರಾಗಿರುವ ಅನಾಮಧೇಯ ತಂಡದಲ್ಲಿ ಪಾಷಾ ಕೂಡಾ ಸದಸ್ಯನಾಗಿದ್ದಾನೆ. ಈ ತಂಡ ವಿದೇಶಿ ಮೂಲದ ಉಗ್ರನೊಬ್ಬನ ಜೊತೆ ಸಂಪರ್ಕ ಹೊಂದಿದ್ದು, ಆತನ ನಿರ್ದೇಶನದಂತೆ ಗಲಭೆ ಸೃಷ್ಟಿಸಲು ಉದ್ದೇಶಿಸಿತ್ತು ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.