ಕ್ಯಾಂಪಸ್ನಲ್ಲಿರುವ ರಸಾಯನ ವಿಜ್ಞಾನ ಬ್ಲಾಕ್, ಗಣಿತ ಬ್ಲಾಕ್, ಗ್ರಂಥಾಲಯ, ಗಡಿಯಾರ ಗೋಪುರ, ಕಲ್ಲಿನ ಕಟ್ಟಡಗಳ ಸಹಿತ 7 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕೆಲ ಕಟ್ಟಡಗಳನ್ನು ಕೆಡವಬೇಕಾದ ಸ್ಥಿತಿ ಇದ್ದು, ಕೆಲವನ್ನು ದುರಸ್ತಿ ಮಾಡಿ ಉಳಿಸಿಕೊಳ್ಳಬಹುದಾಗಿದೆ ಎಂದು ಕುಲಪತಿ ಪ್ರೊ.ಎಸ್.ಜಾಫೆಟ್ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಕ್ಯಾಂಪಸ್ಗೆ ಭೇಟಿ ನೀಡಿದ ವೇಳೆ ಕಟ್ಟಡಗಳ ಶಿಥಿಲಾವಸ್ಥೆ ಕುರಿತು ಮಾಹಿತಿ ನೀಡಲಾಯಿತು.