<p><strong>ಬೆಂಗಳೂರು</strong>: ವೃತ್ತಿಶಿಕ್ಷಣ ಕೋರ್ಸ್ ಪ್ರವೇಶಕ್ಕೆ ನಡೆದ ಸಿಇಟಿಯಲ್ಲಿ ನಗರದ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಗರದ ಚೈತನ್ಯ ಟೆಕ್ನೊ ಸ್ಕೂಲ್, ಆರ್.ವಿ. ಪಿಯು ಕಾಲೇಜು, ವಿದ್ಯಾಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಐದು ರ್ಯಾಂಕ್ ಗಳಿಸಿರುವವರ ಪಟ್ಟಿಯಲ್ಲಿದ್ದಾರೆ.</p>.<p>ಚೈತನ್ಯ ಟೆಕ್ನೊ ಸ್ಕೂಲ್ ನ ಜೆಪಿ ನಗರ ಶಾಖೆಯ ಶುಭನ್ ಎಂಜಿನಿಯರಿಂಗ್ನಲ್ಲಿ 2ನೇ ರ್ಯಾಂಕ್ ಪಡೆದಿದ್ದರೆ, ಎಸ್.ಶ್ರೀವಾಸ 7ನೇ ರ್ಯಾಂಕ್ ಪಡೆದಿದ್ದಾರೆ.</p>.<p>ಉನ್ನತ ರ್ಯಾಂಕ್ ಪಡೆದಿದ್ದರೂ, ಯಾವ ವಿದ್ಯಾರ್ಥಿಯೂ ಗಣಿತ ಮತ್ತು ಭೌತವಿಜ್ಞಾನದಲ್ಲಿ 60ಕ್ಕೆ 60 ಅಂಕಗಳಿಸಲು ಸಾಧ್ಯವಾಗಿಲ್ಲ.</p>.<p>‘ಭೌತವಿಜ್ಞಾನ ಮತ್ತು ಗಣಿತ ಪತ್ರಿಕೆ ಬರೆಯುವಾಗ ಸಮಯ ಸಾಕಾಗಲಿಲ್ಲ. ಪ್ರಶ್ನೆ ಅರ್ಥ ಮಾಡಿಕೊಳ್ಳಲು ಕಷ್ಟವಾ ಯಿತು’ ಎನ್ನುತ್ತಾರೆ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಗಳಿಸಿ ರುವ ಆರ್.ವಿ. ಪಿಯು ಕಾಲೇಜಿನ<br />ಎಂ. ರಕ್ಷಿತ್.</p>.<p>‘ಭೌತವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆ ಹೆಚ್ಚಿದ್ದವು. ನಾಲ್ಕು ಆಯ್ಕೆಗಳ ನಡುವೆ ಹೋಲಿಕೆ ಹೆಚ್ಚಿದ್ದು, ಸರಿ ಉತ್ತರ ಕಂಡುಹಿಡಿಯಲು ಕಷ್ಟವಾಯಿತು’ ಎನ್ನುತ್ತಾರೆ ಕೃಷಿವಿಜ್ಞಾನ ವಿಭಾಗದಲ್ಲಿ ಐದನೇ ರ್ಯಾಂಕ್ ಪಡೆದ ವಿದ್ಯಾಮಂದಿರ ಕಾಲೇಜಿನಪ್ರಜ್ವಲ್ ಕಶ್ಯಪ್.</p>.<p><strong>ವಿದ್ಯಾರ್ಥಿಗಳಲ್ಲಿ ಗೊಂದಲ</strong><br />ನೀಟ್ ಮತ್ತು ಜೆಇಇ ಫಲಿತಾಂಶದ ನಂತರವೇ ಕೌನ್ಸೆಲಿಂಗ್ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ. ಆದರೆ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ತಮ್ಮದೇ ವೇಳಾಪಟ್ಟಿ ಹಾಕಿಕೊಂಡಿದ್ದು, ವಾರದೊಳಗೆ ಕೌನ್ಸೆಲಿಂಗ್ ನಡೆಸಲಿವೆ.ಇವು ಈ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಿದ್ದು, ಫಲಿತಾಂಶವನ್ನೂ ಘೋಷಿಸಿವೆ. ಸರ್ಕಾರ ಕೌನ್ಸೆಲಿಂಗ್ ನಡೆಸು ವವರಿಗೂ ಇವು ಕಾಯುವುದಿಲ್ಲ. ಈ ಕಾಲೇಜುಗಳಲ್ಲಿಯೇ ಸೀಟು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಕೆಇಎ ಕೌನ್ಸೆಲಿಂಗ್ ವರೆಗೂ ಕಾಯಬೇಕೆ ಎಂಬ ಗೊಂದಲ ವಿದ್ಯಾರ್ಥಿಗಳದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವೃತ್ತಿಶಿಕ್ಷಣ ಕೋರ್ಸ್ ಪ್ರವೇಶಕ್ಕೆ ನಡೆದ ಸಿಇಟಿಯಲ್ಲಿ ನಗರದ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಗರದ ಚೈತನ್ಯ ಟೆಕ್ನೊ ಸ್ಕೂಲ್, ಆರ್.ವಿ. ಪಿಯು ಕಾಲೇಜು, ವಿದ್ಯಾಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಐದು ರ್ಯಾಂಕ್ ಗಳಿಸಿರುವವರ ಪಟ್ಟಿಯಲ್ಲಿದ್ದಾರೆ.</p>.<p>ಚೈತನ್ಯ ಟೆಕ್ನೊ ಸ್ಕೂಲ್ ನ ಜೆಪಿ ನಗರ ಶಾಖೆಯ ಶುಭನ್ ಎಂಜಿನಿಯರಿಂಗ್ನಲ್ಲಿ 2ನೇ ರ್ಯಾಂಕ್ ಪಡೆದಿದ್ದರೆ, ಎಸ್.ಶ್ರೀವಾಸ 7ನೇ ರ್ಯಾಂಕ್ ಪಡೆದಿದ್ದಾರೆ.</p>.<p>ಉನ್ನತ ರ್ಯಾಂಕ್ ಪಡೆದಿದ್ದರೂ, ಯಾವ ವಿದ್ಯಾರ್ಥಿಯೂ ಗಣಿತ ಮತ್ತು ಭೌತವಿಜ್ಞಾನದಲ್ಲಿ 60ಕ್ಕೆ 60 ಅಂಕಗಳಿಸಲು ಸಾಧ್ಯವಾಗಿಲ್ಲ.</p>.<p>‘ಭೌತವಿಜ್ಞಾನ ಮತ್ತು ಗಣಿತ ಪತ್ರಿಕೆ ಬರೆಯುವಾಗ ಸಮಯ ಸಾಕಾಗಲಿಲ್ಲ. ಪ್ರಶ್ನೆ ಅರ್ಥ ಮಾಡಿಕೊಳ್ಳಲು ಕಷ್ಟವಾ ಯಿತು’ ಎನ್ನುತ್ತಾರೆ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಗಳಿಸಿ ರುವ ಆರ್.ವಿ. ಪಿಯು ಕಾಲೇಜಿನ<br />ಎಂ. ರಕ್ಷಿತ್.</p>.<p>‘ಭೌತವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆ ಹೆಚ್ಚಿದ್ದವು. ನಾಲ್ಕು ಆಯ್ಕೆಗಳ ನಡುವೆ ಹೋಲಿಕೆ ಹೆಚ್ಚಿದ್ದು, ಸರಿ ಉತ್ತರ ಕಂಡುಹಿಡಿಯಲು ಕಷ್ಟವಾಯಿತು’ ಎನ್ನುತ್ತಾರೆ ಕೃಷಿವಿಜ್ಞಾನ ವಿಭಾಗದಲ್ಲಿ ಐದನೇ ರ್ಯಾಂಕ್ ಪಡೆದ ವಿದ್ಯಾಮಂದಿರ ಕಾಲೇಜಿನಪ್ರಜ್ವಲ್ ಕಶ್ಯಪ್.</p>.<p><strong>ವಿದ್ಯಾರ್ಥಿಗಳಲ್ಲಿ ಗೊಂದಲ</strong><br />ನೀಟ್ ಮತ್ತು ಜೆಇಇ ಫಲಿತಾಂಶದ ನಂತರವೇ ಕೌನ್ಸೆಲಿಂಗ್ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ. ಆದರೆ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ತಮ್ಮದೇ ವೇಳಾಪಟ್ಟಿ ಹಾಕಿಕೊಂಡಿದ್ದು, ವಾರದೊಳಗೆ ಕೌನ್ಸೆಲಿಂಗ್ ನಡೆಸಲಿವೆ.ಇವು ಈ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಿದ್ದು, ಫಲಿತಾಂಶವನ್ನೂ ಘೋಷಿಸಿವೆ. ಸರ್ಕಾರ ಕೌನ್ಸೆಲಿಂಗ್ ನಡೆಸು ವವರಿಗೂ ಇವು ಕಾಯುವುದಿಲ್ಲ. ಈ ಕಾಲೇಜುಗಳಲ್ಲಿಯೇ ಸೀಟು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಕೆಇಎ ಕೌನ್ಸೆಲಿಂಗ್ ವರೆಗೂ ಕಾಯಬೇಕೆ ಎಂಬ ಗೊಂದಲ ವಿದ್ಯಾರ್ಥಿಗಳದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>