‘ಉತ್ತರ ಭಾರತದಿಂದ ಬಂದು ನಗರದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಆರೋಪಿಗಳು, ಬೈಕ್ನಲ್ಲಿ ಸುತ್ತಾಡಿ ಸರಗಳವು ಮಾಡುತ್ತಿದ್ದರು. ಆರೋಪಿ ಅರ್ಜುನ್ ಸಿಂಗ್, ತಮಿಳುನಾಡಿನಲ್ಲಿ 15 ಕಡೆ ಸರಗಳವು ಮಾಡಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಇನ್ನೊಬ್ಬ ಆರೋಪಿ ಚಗನ್ಲಾಲ್, ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ’ ಎಂದು ಅವರು ವಿವರಿಸಿದರು.