ಸಾಹಿತಿ ಚಂದ್ರಶೇಖರ ಕಂಬಾರ ಅವರ 87ನೇ ಜನ್ಮದಿನದ ಪ್ರಯುಕ್ತ ಕಮಲಾಪುರದ ಮಯ ಪ್ರಕಾಶನ, ಸಿರಿನಾಡು ವೆಬ್ ಟಿವಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಸಾವಿರದ ಶರಣವ್ವ ಕನ್ನಡದ ತಾಯೆ’ ಸರಣಿ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಮಾತನಾಡಿದರು. ‘ಪರಿಕಲ್ಪನೆಯ ನಿಜವಾದ ಹರಿಕಾರರು ಬುದ್ಧಿಜೀವಿಗಳು. ಆದ್ದರಿಂದ ಅವರಿಗೆ ನಾಗರಿಕ ಸಮಾಜದಲ್ಲಿ ಜನಮನ್ನಣೆ ದೊರೆಯಬೇಕು. ಯಾವ ದೇಶದಲ್ಲಿ ಬುದ್ಧಿಜೀವಿಗಳಿಗೆ ಗೌರವ ದೊರೆಯುವುದೋ ಅಲ್ಲಿ ಅತ್ಯುನ್ನತ ನಾಗರಿಕತೆ ಇರಲಿದೆ’ ಎಂದು ಹೇಳಿದರು.