ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ತಗುಲಿದ್ದಕ್ಕೆ ಚಾಕುವಿನಿಂದ ಚುಚ್ಚಿ ಬಿಡೋದಾ?: ಚಂದ್ರು ತಾಯಿ

Last Updated 6 ಏಪ್ರಿಲ್ 2022, 8:51 IST
ಅಕ್ಷರ ಗಾತ್ರ

ಬೆಂಗಳೂರು: 'ಬೈಕ್ ತಾಗಿದೆ ಎಂದು ನನ್ನ ಮಗನನ್ನೆ ಕೊಂದುಬಿಡೋದೆ' ಎಂದು ಚಂದ್ರು ತಾಯಿ ಪ್ರಶ್ನಿಸಿದ್ದಾರೆ.

'ನಾವೆಲ್ಲಾ ಊಟ ಮಾಡಿ ಮಲಗಿದ್ದೆವು. ರಾತ್ರಿ 2 ಗಂಟೆ ಸುಮಾರಿಗೆ ಚಂದ್ರುಗೆ ಸೈಮನ್ ಕರೆಮಾಡಿದ್ದ. ಹೀಗಾಗಿ ನಮಗೆ ಹೇಳದೆಯೇ ಆತ ಮನೆಯಿಂದ ಹೊರಗೆ ಹೋಗಿದ್ದ' ಎಂದು ತಿಳಿಸಿದ್ದಾರೆ.

'ನನ್ನ ಮಗ ತುಂಬಾ ಒಳ್ಳೆಯವನು. ಯಾರ ಸಹವಾಸವನ್ನೂ ಮಾಡಿದವನಲ್ಲ. ಯಾರ ತಂಟೆಗೂ ಹೋದವನಲ್ಲ. ಐಟಿಐ ಮುಗಿಸಿ ಕೆಲಸ ಹುಡುಕುತ್ತಿದ್ದ. ಅವನಿಗೇ ಹೀಗಾಯಿತಲ್ಲ. ಆ ಪಾಪಿಗಳಿಗೆ ಕರುಣೆಯೇ ಇಲ್ಲವೆ' ಎಂದು ರೋಧಿಸಿದರು.

'ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದ. ಅತನಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರು. ಏನಾದರೂ ತೊಂದರೆಯಾಗಬಹುದೆಂದು. ನಾವೇ ಕೆಲಸ ಬಿಡಿಸಿದ್ದೆವು. ಹತ್ತು ದಿನಗಳಿಂದ ಮನೆಯಲ್ಲಿ ಇದ್ದ' ಎಂದು ಕಣ್ಣೀರಿಟ್ಟರು.

'ಕರ್ನಾಟಕದಲ್ಲಿ ಕನ್ನಡ ತಾನೆ ಮಾತಾಡಬೇಕು. ಉರ್ದು ಬರಲಿಲ್ಲ ಅಂತ ಅವನನ್ನು ಸಾಯಿಸಿಬಿಡೋದಾ' ಎಂದು ಸಂಬಂಧಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

'ನಮ್ಮ ಹುಡುಗ ಯಾರ ಜೊತೆಗಾದ್ರು ಗಲಾಟೆ ಮಾಡಿದ್ದಾನೆಯೇ. ಆತ ಕಬಾಬ್ ತಿನ್ನುವುದಕ್ಕೆ ತೆರಳಿದ್ದ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT