ಪತ್ರಕರ್ತಸುಗತ ಶ್ರೀನಿವಾಸರಾಜು, ‘ಚಿರಂಜೀವಿ ಅವರ ಬರವಣಿಗೆ ತೊರೆಯ ಅನುಭವ ನೀಡುತ್ತಿತ್ತು. ಅವರ ಮಾತುಗಳಲ್ಲಿನ ಮೃದುತ್ವ ಬರಹದಲ್ಲೂ ಕಾಣಸಿಗುತ್ತದೆ. ಚಿರಂಜೀವಿ ಅವರಿಗೆ ಎಲ್ಲವನ್ನೂ ಅಪ್ಪಿಕೊಳ್ಳುವ ಮನೋಭಾವವಿದೆ. ಇದು ಅವರ ಬರಹದ ಗುಣವೂ ಆಗಿದೆ. ಲೇಖಕರಿಗೆ ಯಾವುದೂ ಅಮುಖ್ಯವಲ್ಲ. ಎಲ್ಲವೂ ಮುಖ್ಯವೇ ಆಗಿದೆ. ಅವರ ವಿಚಾರಗಳಲ್ಲಿ ಸೌಂದರ್ಯ, ವಿಜ್ಞಾನ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವೂ ಅಡಕವಾಗಿದೆ’ ಎಂದರು.