<p><strong>ಬೆಂಗಳೂರು</strong>: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ಹಮ್ಮಿಕೊಂಡಿರುವ ರಂಗಕರ್ಮಿ ಪ್ರಸನ್ನ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು. </p>.<p>‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಪ್ರದರ್ಶನದಲ್ಲಿ ಅವರು ರಚಿಸಿದ 78 ಕಲಾಕೃತಿಗಳನ್ನು ಇರಿಸಲಾಗಿದೆ. ಕಲಾ ವಿಮರ್ಶಕ ರವೀಂದ್ರ ತ್ರಿಪಾಠಿ ಅವರು ಈ ಪ್ರದರ್ಶನ ಉದ್ಘಾಟಿಸಿ, ಕಲಾಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಪ್ಪು–ಬಿಳುಪಿನ ಕಲಾಕೃತಿಗಳು ಪ್ರಭುತ್ವ ಮತ್ತು ಮನುಷ್ಯನ ನಡುವಿನ ಸಂಘರ್ಷ, ನಿಸರ್ಗದ ಜತೆಗೆ ಸಹಬಾಳ್ವೆ ಹಾಗೂ ಸಂಘರ್ಷದಂತಹ ವಿಷಯಗಳನ್ನು ಕೇಂದ್ರೀಕರಿಸಿವೆ. 13x19 ಇಂಚು ಅಳತೆಯ ಈ ಕಲಾಕೃತಿಗಳಿಗೆ ಕನಿಷ್ಠ ಬೆಲೆ ₹ 7 ಸಾವಿರ ನಿಗದಿಪಡಿಸಲಾಗಿದೆ.</p>.<p>‘ರಂಗಭೂಮಿಯ ಗಾಢವಾದ ಪ್ರಭಾವ ಈ ಚಿತ್ರಗಳ ಮೇಲಿದೆ. ಈ ಚಿತ್ರಗಳನ್ನು ಬಿಡಿಸುವಾಗ ಪಾತ್ರಗಳಾಗಿ ಗ್ರಹಿಸಿ, ಪಾತ್ರ ಪಾತ್ರಗಳ ನಡುವಿನ ಘರ್ಷಣೆ, ತಿಕ್ಕಾಟ, ಪ್ರೀತಿ ಎಲ್ಲವನ್ನೂ ತಂದಿದ್ದೇನೆ. ಈ ಕಲಾಕೃತಿಗಳ ಮಾರಾಟದಿಂದ ಬರುವ ಎಲ್ಲ ಹಣವನ್ನು ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಗೆ ನೀಡುತ್ತಿದ್ದೇನೆ. ವಿವಿಧ ರಾಜ್ಯಗಳಲ್ಲಿಯೂ ಈ ಪ್ರದರ್ಶನ ನಡೆಯಲಿದೆ’ ಎಂದು ಪ್ರಸನ್ನ ಹೇಳಿದರು.</p>.<p>‘ಕಲಾಕೃತಿಗಳಿಗೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆ ರೂಪದಲ್ಲಿ ನೀಡಬಹುದಾಗಿದೆ. ಮಕ್ಕಳ ರಂಗ ಶಿಕ್ಷಣಕ್ಕೆ ಆ ಹಣ ಸಹಕಾರಿಯಾಗಲಿದೆ’ ಎಂದರು.</p>.<p>ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ಸಾಹಿತಿ ಹಂಪ ನಾಗರಾಜಯ್ಯ, ಲೇಖಕ ಅರುಣ್ ರಾಮನ್, ದೂರದರ್ಶನ ಚಂದನದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಎಚ್.ಎನ್. ಆರತಿ ಉಪಸ್ಥಿತರಿದ್ದರು.</p>.<p>ಈ ಪ್ರದರ್ಶನವು ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ನ.2ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ಹಮ್ಮಿಕೊಂಡಿರುವ ರಂಗಕರ್ಮಿ ಪ್ರಸನ್ನ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು. </p>.<p>‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಪ್ರದರ್ಶನದಲ್ಲಿ ಅವರು ರಚಿಸಿದ 78 ಕಲಾಕೃತಿಗಳನ್ನು ಇರಿಸಲಾಗಿದೆ. ಕಲಾ ವಿಮರ್ಶಕ ರವೀಂದ್ರ ತ್ರಿಪಾಠಿ ಅವರು ಈ ಪ್ರದರ್ಶನ ಉದ್ಘಾಟಿಸಿ, ಕಲಾಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಪ್ಪು–ಬಿಳುಪಿನ ಕಲಾಕೃತಿಗಳು ಪ್ರಭುತ್ವ ಮತ್ತು ಮನುಷ್ಯನ ನಡುವಿನ ಸಂಘರ್ಷ, ನಿಸರ್ಗದ ಜತೆಗೆ ಸಹಬಾಳ್ವೆ ಹಾಗೂ ಸಂಘರ್ಷದಂತಹ ವಿಷಯಗಳನ್ನು ಕೇಂದ್ರೀಕರಿಸಿವೆ. 13x19 ಇಂಚು ಅಳತೆಯ ಈ ಕಲಾಕೃತಿಗಳಿಗೆ ಕನಿಷ್ಠ ಬೆಲೆ ₹ 7 ಸಾವಿರ ನಿಗದಿಪಡಿಸಲಾಗಿದೆ.</p>.<p>‘ರಂಗಭೂಮಿಯ ಗಾಢವಾದ ಪ್ರಭಾವ ಈ ಚಿತ್ರಗಳ ಮೇಲಿದೆ. ಈ ಚಿತ್ರಗಳನ್ನು ಬಿಡಿಸುವಾಗ ಪಾತ್ರಗಳಾಗಿ ಗ್ರಹಿಸಿ, ಪಾತ್ರ ಪಾತ್ರಗಳ ನಡುವಿನ ಘರ್ಷಣೆ, ತಿಕ್ಕಾಟ, ಪ್ರೀತಿ ಎಲ್ಲವನ್ನೂ ತಂದಿದ್ದೇನೆ. ಈ ಕಲಾಕೃತಿಗಳ ಮಾರಾಟದಿಂದ ಬರುವ ಎಲ್ಲ ಹಣವನ್ನು ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಗೆ ನೀಡುತ್ತಿದ್ದೇನೆ. ವಿವಿಧ ರಾಜ್ಯಗಳಲ್ಲಿಯೂ ಈ ಪ್ರದರ್ಶನ ನಡೆಯಲಿದೆ’ ಎಂದು ಪ್ರಸನ್ನ ಹೇಳಿದರು.</p>.<p>‘ಕಲಾಕೃತಿಗಳಿಗೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆ ರೂಪದಲ್ಲಿ ನೀಡಬಹುದಾಗಿದೆ. ಮಕ್ಕಳ ರಂಗ ಶಿಕ್ಷಣಕ್ಕೆ ಆ ಹಣ ಸಹಕಾರಿಯಾಗಲಿದೆ’ ಎಂದರು.</p>.<p>ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ಸಾಹಿತಿ ಹಂಪ ನಾಗರಾಜಯ್ಯ, ಲೇಖಕ ಅರುಣ್ ರಾಮನ್, ದೂರದರ್ಶನ ಚಂದನದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಎಚ್.ಎನ್. ಆರತಿ ಉಪಸ್ಥಿತರಿದ್ದರು.</p>.<p>ಈ ಪ್ರದರ್ಶನವು ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ನ.2ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>