<p><strong>ಬೆಂಗಳೂರು</strong>: ಜನನಾಯಕರಾಗಿ ಕೆಲಸ ಮಾಡುತ್ತಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಗೌರವಿಸಲಾಯಿತು.</p>.<p>ಸಂಸದರು, ಶಾಸಕರು, ಸಚಿವರು ಆಗಿರುವ ಎಂಟು ಸಾಧಕರಾದ ಸುಧಾಮೂರ್ತಿ, ಫ್ರಾನ್ಸಿಸ್ ಜಾರ್ಜ್, ಕೃಷ್ಣ ಬೈರೇಗೌಡ, ಮಲ್ಲೇಶ್ ಬಾಬು, ಶಿಲ್ಪಿ ನೇಹಾ ಟಿರ್ಕೆ, ಚಾಂಡಿ ಉಮ್ಮನ್, ದರ್ಶನ್ ಧ್ರುವನಾರಾಯಣ, ಸಾಗರ್ ಈಶ್ವರ್ ಖಂಡ್ರೆ ಗೌರವ ಸ್ವೀಕರಿಸಿದರು.</p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ವಿಶ್ವವಿದ್ಯಾಲಯಗಳು ಚಿಂತನಾ ನಾಯಕರನ್ನು ತಯಾರು ಮಾಡಬೇಕು. ಕ್ರೈಸ್ಟ್ ವಿಶ್ವವಿದ್ಯಾಲಯವು ಅಂಥ ನಾಯಕರನ್ನು ತಯಾರು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.</p>.<p>ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಕ್ರೈಸ್ಟ್ ಸಂಸ್ಥೆಯಲ್ಲಿ ಬೋಧನೆ ಮಾಡುತ್ತಿದ್ದಾಗ ಸಿಕ್ಕಿದ ಪ್ರೀತಿ, ಗಳಿಸಿದ ಉತ್ಸಾಹ ಜೀವನವನ್ನು ಹೇಗೆ ಶ್ರೀಮಂತಗೊಳಿಸಿತು ಎಂದು ನೆನಪುಗಳನ್ನು ಹಂಚಿಕೊಂಡರು.</p>.<p>‘ಯಾವುದೇ ರಾಜಕೀಯ ಅನುಭವ ಇಲ್ಲದೇ ಇದ್ದ ಕಾಲದಲ್ಲಿ ರಾಜಕೀಯಕ್ಕೆ ಬರಬೇಕಾಯಿತು. ಕಾಲೇಜು ದಿನಗಳಲ್ಲಿ ರೂಪುಗೊಂಡ ಸ್ನೇಹದ ಬಂಧಗಳು ಕಷ್ಟಕಾಲದಲ್ಲಿ ನೆರವಾದವು’ ಎಂದು ಶಾಸಕ ಮಲ್ಲೇಶ್ ಬಾಬು ತಿಳಿಸಿದರು.</p>.<p>ಇಲ್ಲಿ ಕಲಿಯುವ ಸಮಯದಲ್ಲಿ ನಾನು ಮುಖ್ಯಮಂತ್ರಿಯ ಮಗ ತೋರಿಸಿಕೊಳ್ಳಲು ಅವಕಾಶ ಇಲ್ಲದಂತೆ ಎಲ್ಲ ವಿದ್ಯಾರ್ಥಿಗಳಂತೆ ನೋಡಿ ಕಲಿಸಿದರು ಎಂದು ಚಾಂಡಿ ಉಮ್ಮನ್ ಹೇಳಿದರು.</p>.<p>ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಲಿತ ಶಿಸ್ತು ಬದುಕಿನಲ್ಲಿ ಉಪಯೋಗವಾಯಿತು ಎಂದು ಶಾಸಕ ದರ್ಶನ ಧ್ರುವನಾರಾಯಣ ತಿಳಿಸಿದರು. ಸಂಸದ ಸಾಗರ್ ಈಶ್ವರ್ ಖಂಡ್ರೆ ಅವರು ಅತ್ಯಂತ ಕಿರಿಯ ಹಳೆಯ ವಿದ್ಯಾರ್ಥಿಯಾಗಿ ಪ್ರೇಕ್ಷಕರನ್ನು ಮೋಡಿ ಮಾಡಿದರು. </p>.<p>ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಧರ್ಮಗುರು ಜೋಸ್ ಸಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜುಗ್ನು ಓಬೆರಾಯ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜನನಾಯಕರಾಗಿ ಕೆಲಸ ಮಾಡುತ್ತಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಗೌರವಿಸಲಾಯಿತು.</p>.<p>ಸಂಸದರು, ಶಾಸಕರು, ಸಚಿವರು ಆಗಿರುವ ಎಂಟು ಸಾಧಕರಾದ ಸುಧಾಮೂರ್ತಿ, ಫ್ರಾನ್ಸಿಸ್ ಜಾರ್ಜ್, ಕೃಷ್ಣ ಬೈರೇಗೌಡ, ಮಲ್ಲೇಶ್ ಬಾಬು, ಶಿಲ್ಪಿ ನೇಹಾ ಟಿರ್ಕೆ, ಚಾಂಡಿ ಉಮ್ಮನ್, ದರ್ಶನ್ ಧ್ರುವನಾರಾಯಣ, ಸಾಗರ್ ಈಶ್ವರ್ ಖಂಡ್ರೆ ಗೌರವ ಸ್ವೀಕರಿಸಿದರು.</p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ವಿಶ್ವವಿದ್ಯಾಲಯಗಳು ಚಿಂತನಾ ನಾಯಕರನ್ನು ತಯಾರು ಮಾಡಬೇಕು. ಕ್ರೈಸ್ಟ್ ವಿಶ್ವವಿದ್ಯಾಲಯವು ಅಂಥ ನಾಯಕರನ್ನು ತಯಾರು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.</p>.<p>ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು ಕ್ರೈಸ್ಟ್ ಸಂಸ್ಥೆಯಲ್ಲಿ ಬೋಧನೆ ಮಾಡುತ್ತಿದ್ದಾಗ ಸಿಕ್ಕಿದ ಪ್ರೀತಿ, ಗಳಿಸಿದ ಉತ್ಸಾಹ ಜೀವನವನ್ನು ಹೇಗೆ ಶ್ರೀಮಂತಗೊಳಿಸಿತು ಎಂದು ನೆನಪುಗಳನ್ನು ಹಂಚಿಕೊಂಡರು.</p>.<p>‘ಯಾವುದೇ ರಾಜಕೀಯ ಅನುಭವ ಇಲ್ಲದೇ ಇದ್ದ ಕಾಲದಲ್ಲಿ ರಾಜಕೀಯಕ್ಕೆ ಬರಬೇಕಾಯಿತು. ಕಾಲೇಜು ದಿನಗಳಲ್ಲಿ ರೂಪುಗೊಂಡ ಸ್ನೇಹದ ಬಂಧಗಳು ಕಷ್ಟಕಾಲದಲ್ಲಿ ನೆರವಾದವು’ ಎಂದು ಶಾಸಕ ಮಲ್ಲೇಶ್ ಬಾಬು ತಿಳಿಸಿದರು.</p>.<p>ಇಲ್ಲಿ ಕಲಿಯುವ ಸಮಯದಲ್ಲಿ ನಾನು ಮುಖ್ಯಮಂತ್ರಿಯ ಮಗ ತೋರಿಸಿಕೊಳ್ಳಲು ಅವಕಾಶ ಇಲ್ಲದಂತೆ ಎಲ್ಲ ವಿದ್ಯಾರ್ಥಿಗಳಂತೆ ನೋಡಿ ಕಲಿಸಿದರು ಎಂದು ಚಾಂಡಿ ಉಮ್ಮನ್ ಹೇಳಿದರು.</p>.<p>ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಲಿತ ಶಿಸ್ತು ಬದುಕಿನಲ್ಲಿ ಉಪಯೋಗವಾಯಿತು ಎಂದು ಶಾಸಕ ದರ್ಶನ ಧ್ರುವನಾರಾಯಣ ತಿಳಿಸಿದರು. ಸಂಸದ ಸಾಗರ್ ಈಶ್ವರ್ ಖಂಡ್ರೆ ಅವರು ಅತ್ಯಂತ ಕಿರಿಯ ಹಳೆಯ ವಿದ್ಯಾರ್ಥಿಯಾಗಿ ಪ್ರೇಕ್ಷಕರನ್ನು ಮೋಡಿ ಮಾಡಿದರು. </p>.<p>ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಧರ್ಮಗುರು ಜೋಸ್ ಸಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜುಗ್ನು ಓಬೆರಾಯ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>