ಗೊಂದಲದ ಹೇಳಿಕೆ: ‘ಲಕ್ಷ್ಮಿ ಅವರ ಸಾವಿನ ಸಂಬಂಧ, ಸ್ನೇಹಿತ ಮನೋಹರ್ ಅಲಿಯಾಸ್ ಮನು, ಆತನ ಸ್ನೇಹಿತರಾದ ರಾಹುಲ್, ಪ್ರಜ್ವಲ್, ರಂಜಿತ್ ಹಾಗೂ ಧರ್ಮೇಗೌಡ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರೆಲ್ಲರೂ ಹೇಳಿಕೆ ನೀಡಿದ್ದು, ಅದರಲ್ಲಿ ಸಾಕಷ್ಟು ಗೊಂದಲಗಳು ಇವೆ’ ಎಂದೂ ಅಧಿಕಾರಿ ತಿಳಿಸಿದರು.