<p><strong>ಬೆಂಗಳೂರು</strong>: ಸಿಗರೇಟ್ ಬಾಕ್ಸ್, ಕಾರು ಕಳ್ಳತನ ಹಾಗೂ ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ರಾಜಸ್ಥಾನದ ಜಿತೇಂದ್ರಕುಮಾರ್ (24), ಪ್ರಕಾಶ್ (38), ಅಮರರಾಮ್ (42) ಹಾಗೂ ರಮೇಶ್ ಕುಮಾರ್ (24) ಬಂಧಿತರು. ಅವರಿಂದ ₹ 28.70 ಲಕ್ಷ ಮೌಲ್ಯದ 20 ಸಿಗರೇಟ್ ಬಾಕ್ಸ್ಗಳು, 2 ಕಾರು ಹಾಗೂ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ಹೇಳಿದರು.</p>.<p>‘ಫೆ. 15ರಂದು ಆರೋಪಿಗಳು, ಓ.ಟಿ. ಪೇಟೆ ಜಂಕ್ಷನ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅವರು ಬಳಸುತ್ತಿದ್ದ ಕಾರಿಗೆ ನೋಂದಣಿ ಫಲಕ ಇರಲಿಲ್ಲ. ಅನುಮಾನಗೊಂಡ ಪಿಎಸ್ಐ ಜಿ. ಶ್ರುತಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಪರಿಶೀಲನೆ ನಡೆಸಿದ್ದರು. ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು’ ಎಂದೂ ತಿಳಿಸಿದರು.</p>.<p>‘ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಎರಡು ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ದಾವಣಗೆರೆಯಲ್ಲಿ 12 ಸಿಗರೇಟ್ ಬಾಕ್ಸ್ ಹಾಗೂ 8 ಸಿಗರೇಟ್ ಬಾಕ್ಸ್ಗಳನ್ನು ಕದ್ದಿದ್ದರು. ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳವು ಮಾಡಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಮನೆಯಲ್ಲಿ ಕಳವು ಮಾಡಲು ಹಾಗೂ ಬೀಗ ಮುರಿಯಲು ಆರೋಪಿಗಳು ಕೆಲ ಉಪಕರಣ ಬಳಸುತ್ತಿದ್ದರು.’</p>.<p>‘ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ಗ್ಯಾಂಗ್ ಕಟ್ಟಿಕೊಂಡಿದ್ದರು. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಬೆಂಗಳೂರಿನಲ್ಲೂ ಮತ್ತಷ್ಟು ಮನೆಗಳಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದರು’ ಎಂದೂ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಿಗರೇಟ್ ಬಾಕ್ಸ್, ಕಾರು ಕಳ್ಳತನ ಹಾಗೂ ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ರಾಜಸ್ಥಾನದ ಜಿತೇಂದ್ರಕುಮಾರ್ (24), ಪ್ರಕಾಶ್ (38), ಅಮರರಾಮ್ (42) ಹಾಗೂ ರಮೇಶ್ ಕುಮಾರ್ (24) ಬಂಧಿತರು. ಅವರಿಂದ ₹ 28.70 ಲಕ್ಷ ಮೌಲ್ಯದ 20 ಸಿಗರೇಟ್ ಬಾಕ್ಸ್ಗಳು, 2 ಕಾರು ಹಾಗೂ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ಹೇಳಿದರು.</p>.<p>‘ಫೆ. 15ರಂದು ಆರೋಪಿಗಳು, ಓ.ಟಿ. ಪೇಟೆ ಜಂಕ್ಷನ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅವರು ಬಳಸುತ್ತಿದ್ದ ಕಾರಿಗೆ ನೋಂದಣಿ ಫಲಕ ಇರಲಿಲ್ಲ. ಅನುಮಾನಗೊಂಡ ಪಿಎಸ್ಐ ಜಿ. ಶ್ರುತಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಪರಿಶೀಲನೆ ನಡೆಸಿದ್ದರು. ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು’ ಎಂದೂ ತಿಳಿಸಿದರು.</p>.<p>‘ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಎರಡು ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ದಾವಣಗೆರೆಯಲ್ಲಿ 12 ಸಿಗರೇಟ್ ಬಾಕ್ಸ್ ಹಾಗೂ 8 ಸಿಗರೇಟ್ ಬಾಕ್ಸ್ಗಳನ್ನು ಕದ್ದಿದ್ದರು. ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳವು ಮಾಡಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಮನೆಯಲ್ಲಿ ಕಳವು ಮಾಡಲು ಹಾಗೂ ಬೀಗ ಮುರಿಯಲು ಆರೋಪಿಗಳು ಕೆಲ ಉಪಕರಣ ಬಳಸುತ್ತಿದ್ದರು.’</p>.<p>‘ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ಗ್ಯಾಂಗ್ ಕಟ್ಟಿಕೊಂಡಿದ್ದರು. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಬೆಂಗಳೂರಿನಲ್ಲೂ ಮತ್ತಷ್ಟು ಮನೆಗಳಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದರು’ ಎಂದೂ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>