ಬೆಂಗಳೂರು: ಸುಲಿಗೆ, ಮನೆಯಲ್ಲಿ ಕಳ್ಳತನ ಹಾಗೂ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಜೆ.ಜೆ. ನಗರದ ಅಫ್ಜಲ್ ಪಾಷಾ (24), ಅಫ್ರಿದ್ ಖಾನ್ (23) ಹಾಗೂ ಆಂಧ್ರಪ್ರದೇಶದ ಪ್ರವೀಣ್ ಕುಮಾರ್ (28) ಬಂಧಿತರು. ಅವರಿಂದ ₹ 22.95 ಲಕ್ಷ ಮೌಲ್ಯದ ಚಿನ್ನಾಭರಣ, 43 ಮೊಬೈಲ್, 3 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಂಪೇಗೌಡ ರಸ್ತೆಯಲ್ಲಿ ಇದೇ 13ರಂದು ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಸುಲಿಗೆ ಮಾಡಲಾಗಿತ್ತು. ಈ ಕುರಿತ ದೂರಿನನ್ವಯ ಅಫ್ಜಲ್ ಪಾಷಾನನ್ನು ಬಂಧಿಸಲಾಯಿತು. ಆತ ನೀಡಿದ ಮಾಹಿತಿಯಂತೆ ಉಳಿದಿಬ್ಬರು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.
41 ಮೊಬೈಲ್ಗಳಿಗೆ ವಾರಸುದಾರರಿಲ್ಲ: ‘ಆರೋಪಿಗಳಿಂದ ಜಪ್ತಿ ಮಾಡಲಾದ ಮೊಬೈಲ್ಗಳ ಪೈಕಿ 41 ಮೊಬೈಲ್ಗಳ ವಾರಸುದಾರರ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.