‘ಆರೋಪಿ, ದೂರುದಾರ ತಾಜ್ಪೀರ್ರ ಅಣ್ಣನ ಮಗನಾದ ಚಿಕ್ಕಬಳ್ಳಾಪುರದ ವಲಿಜಾನ್ನನ್ನು ಪರಿಚಯ ಮಾಡಿಕೊಂಡಿದ್ದ. ಅವರ ಜೊತೆಗೆ ಆಗಾಗ ತಾಜ್ಪೀರ್ ಅವರ ಮನೆಗೂ ಹೋಗಿಬರುತ್ತಿದ್ದ. ದೂರುದಾರರು ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿಟ್ಟಿದ್ದರು. ಅದನ್ನು ತಿಳಿದುಕೊಂಡಿದ್ದ ಆರೋಪಿ ಮನೆಯ ಕೀ ಕದ್ದು, ಯಾರೂ ಇಲ್ಲದ ವೇಳೆಯಲ್ಲಿ ಒಳನುಗ್ಗಿ ಚಿನ್ನಾಭರಣ ಕದ್ದೊಯ್ದಿದ್ದ’ ಎಂದು ಪೊಲೀಸರು ಹೇಳಿದರು.