ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಹಿಂದೆ ಚಿಕ್ಕದಾಗಿ ಪ್ರಾರಂಭವಾದ ವಿಜಯಾ, ಕರ್ಣಾಟಕ ಬ್ಯಾಂಕ್ ಬಳಿಕ ದೊಡ್ಡದಾಗಿ ಬೆಳೆದವು. ಆಡಳಿತ ಮಂಡಳಿ ಮೇಲೆ ನಂಬಿಕೆಯಿಟ್ಟು ಜನರು ಠೇವಣಿ ಇಟ್ಟಿರುತ್ತಾರೆ. ಆದ್ದರಿಂದ ಗ್ರಾಹಕರ ವಿಶ್ವಾಸ ಕಾಪಾಡಿಕೊಂಡು ಹೋಗಬೇಕು. ಆರ್ಯವೈಶ್ಯ ಸಮಾಜದವರು ಈಗಲೂ ವಿಶ್ವ ಪ್ರಸಿದ್ಧವಾದ ಅಗರಬತ್ತಿ, ವಸ್ತ್ರ ಉದ್ಯಮದಲ್ಲಿ ತೊಡಗಿಕೊಂಡಿದ್ದು, ವಿದ್ಯಾ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.