ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ‘ಕೋವಿಡ್ ಎರಡೂ ಅಲೆಗಳ ನಡುವೆಯೂ ಮೂರು ಬಾರಿ ಇ-ಲೋಕ ಅದಾಲತ್ ಅತ್ಯಂತ ಯಶಸ್ವಿಯಾಗಿ ನಡೆದಿದೆ. 2020ರ ಸೆಪ್ಟೆಂಬರ್ನಲ್ಲಿ 2.31 ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಇದರಲ್ಲಿ 1.15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ, 2020ರ ಡಿಸೆಂಬರ್ನಲ್ಲಿ ನಡೆದ ಅದಾಲತ್ನಲ್ಲಿ 4.64 ಲಕ್ಷ ಪ್ರಕರಣಗಳ ಪೈಕಿ 2.63 ಲಕ್ಷ ಪ್ರಕರಣ ಬಗೆಹರಿಸಲಾಗಿದೆ. ಇನ್ನು 2021ರ ಮಾರ್ಚ್ನಲ್ಲಿ ಅತಿ ಹೆಚ್ಚು 5.44 ಲಕ್ಷ ಪ್ರಕರಣಗಳನ್ನು ಪತ್ತೆ ಮಾಡಿ, 3.32 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.