<p><strong>ಬೆಂಗಳೂರು:</strong> ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.</p>.<p>ಕೇಂದ್ರ ಮಾಹಿತಿ ಆಯೋಗವು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಹಿತಿ ಆಯುಕ್ತರುಗಳ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಇದೇ 12ರಂದು ಆಯೋಜಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತರು ಮಾಹಿತಿ ನೀಡದಿರುವ ಬಗ್ಗೆ ಇತರ ಆಯುಕ್ತರುಗಳು ಅಸಮಾಧಾನ ಹೊರಹಾಕಿದ್ದಾರೆ. ಇದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.</p>.<p>ಸಮ್ಮೇಳನದ ಸಂಬಂಧ ಎನ್.ಜಿ. ಶ್ರೀನಿವಾಸ್ ಅವರಿಗೆ ಸೆ.20ರಂದು ಪತ್ರ ಬರೆದಿದ್ದಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಸುಧೀರ್ ಭಾರ್ಗವ, ‘ರಾಜ್ಯದ ಎಲ್ಲಾ ಮಾಹಿತಿ ಆಯುಕ್ತರು ಮತ್ತು ಕಾರ್ಯದರ್ಶಿಯವರೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿ’ ಎಂದು ಕೋರಿದ್ದರು.</p>.<p>ಆಸಕ್ತ ನಿವೃತ್ತ ಮಾಹಿತಿ ಆಯುಕ್ತರು ಮತ್ತು ಭಾಗವಹಿಸಲು ಇಚ್ಛಿಸುವ ಇತರೇ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಹೆಸರನ್ನೂ ಸೂಚಿಸಿ, ಸೆ.30ರೊಳಗೆ ಪ್ರತಿಕ್ರಿಯೆ ಕಳುಹಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದರು.</p>.<p>ಆದರೆ, ರಾಜ್ಯ ಮಾಹಿತಿ ಆಯೋಗದ ಇತರ ಒಂಬತ್ತು ಮಾಹಿತಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ‘ಸಮ್ಮೇಳನ ನಡೆಯುತ್ತಿದೆ ಎಂಬುದು ಗೊತ್ತು. ಆದರೆ, ಈ ಬಗ್ಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ನಮಗೆ ಅಧಿಕೃತ ಮಾಹಿತಿಯನ್ನೇ ನೀಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆಯುಕ್ತರೊಬ್ಬರು ‘ಪ್ರಜಾವಾಣಿ’ ಬಳಿ ಬೇಸರ ತೋಡಿಕೊಂಡರು.</p>.<p>‘ನಾನು ಮುಖ್ಯ ಆಯುಕ್ತ, ಉಳಿದ ವರೆಲ್ಲರೂ ನನ್ನ ಅಧೀನದಲ್ಲಿರಬೇಕು ಎಂಬ ಮನೋಭಾವ ಅವರಲ್ಲಿ ಇದ್ದಂತಿದೆ. ಕಾಯ್ದೆಗಳ ಪ್ರಕಾರ ಎಲ್ಲರೂ ಮಾಹಿತಿ ಆಯುಕ್ತರೇ. ನಮ್ಮಲ್ಲೇ ಈ ರೀತಿಯ ತಾರತಮ್ಯ ಇದ್ದರೆ ಹೇಗೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇನ್ನೊಬ್ಬ ಆಯುಕ್ತರು ಪ್ರಶ್ನಿಸಿದರು.</p>.<p>ಈ ಬೆಳವಣಿಗೆ ಬಗ್ಗೆ ಎನ್.ಜಿ. ಶ್ರೀನಿವಾಸ್ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತು. ಕರೆ ಸ್ವೀಕರಿಸಿದ ಅವರು, ವಿಷಯ ಪ್ರಸ್ತಾಪಿಸಿದ ಕೂಡಲೇ ಕರೆ ಸ್ಥಗಿತಗೊಳಿಸಿದರು. ಮತ್ತೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.</p>.<p><strong>‘ಮೇಲರಿಮೆ ಕಾರಣ ಇರಬಹುದು’</strong></p>.<p>‘ಮಾಹಿತಿ ಆಯುಕ್ತ ಎಂದರೆ ನಾನೊಬ್ಬನೇ ಎಂಬ ಭಾವನೆ ಅವರಲ್ಲಿ ಇರಬಹುದು. ಹೀಗಾಗಿ ಉಳಿದವರನ್ನೆಲ್ಲಾ ನಿರ್ಲಕ್ಷ್ಯ ಮಾಡಿದಿದ್ದಾರೆ’ ಎಂದು ಮಾಹಿತಿ ಆಯುಕ್ತ ಎಲ್. ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.</p>.<p>‘14 ವರ್ಷಗಳಿಂದ ನಡೆಯು<br />ತ್ತಿರುವ ಸಮ್ಮೇಳನಕ್ಕೆ ರಾಜ್ಯದಲ್ಲಿ ಮುಖ್ಯ ಆಯುಕ್ತರಾದವರು ಉಳಿದೆಲ್ಲಾ ಆಯುಕ್ತರನ್ನು ಕರೆದೊಯ್ಯುತ್ತಿದ್ದರು. ನಾನು ಕೂಡ ಈ ಹಿಂದೆ ಮುಖ್ಯ ಆಯುಕ್ತರ ಹುದ್ದೆ ನಿರ್ವಹಿಸಿದ್ದೇನೆ. ಎರಡು ಸಮ್ಮೇಳನಗಳಿಗೆ ಎಲ್ಲಾ ಮಾಹಿತಿ ಆಯುಕ್ತರನ್ನೂ ಕರೆದೊಯ್ದಿದ್ದೆ’ ಎಂದರು.</p>.<p>‘ಸಮ್ಮೇಳನದಲ್ಲಿ ಹಲವು ತಜ್ಞರು ವಿಷಯ ಮಂಡಿಸುತ್ತಾರೆ. ಭಾಗವಹಿಸಿದರೆ ನಮ್ಮ ಜ್ಞಾನ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಯಾವ ಕಾರಣಕ್ಕೆ ಸಮ್ಮೇಳನದ ವಿಷಯವನ್ನು ಮುಖ್ಯ ಆಯುಕ್ತರು ಮುಚ್ಚಿಟ್ಟಿದ್ದಾರೆಯೋ ಗೊತ್ತಿಲ್ಲ. ಆಯೋಗದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.</p>.<p>ಕೇಂದ್ರ ಮಾಹಿತಿ ಆಯೋಗವು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಹಿತಿ ಆಯುಕ್ತರುಗಳ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಇದೇ 12ರಂದು ಆಯೋಜಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತರು ಮಾಹಿತಿ ನೀಡದಿರುವ ಬಗ್ಗೆ ಇತರ ಆಯುಕ್ತರುಗಳು ಅಸಮಾಧಾನ ಹೊರಹಾಕಿದ್ದಾರೆ. ಇದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.</p>.<p>ಸಮ್ಮೇಳನದ ಸಂಬಂಧ ಎನ್.ಜಿ. ಶ್ರೀನಿವಾಸ್ ಅವರಿಗೆ ಸೆ.20ರಂದು ಪತ್ರ ಬರೆದಿದ್ದಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಸುಧೀರ್ ಭಾರ್ಗವ, ‘ರಾಜ್ಯದ ಎಲ್ಲಾ ಮಾಹಿತಿ ಆಯುಕ್ತರು ಮತ್ತು ಕಾರ್ಯದರ್ಶಿಯವರೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿ’ ಎಂದು ಕೋರಿದ್ದರು.</p>.<p>ಆಸಕ್ತ ನಿವೃತ್ತ ಮಾಹಿತಿ ಆಯುಕ್ತರು ಮತ್ತು ಭಾಗವಹಿಸಲು ಇಚ್ಛಿಸುವ ಇತರೇ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಹೆಸರನ್ನೂ ಸೂಚಿಸಿ, ಸೆ.30ರೊಳಗೆ ಪ್ರತಿಕ್ರಿಯೆ ಕಳುಹಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದರು.</p>.<p>ಆದರೆ, ರಾಜ್ಯ ಮಾಹಿತಿ ಆಯೋಗದ ಇತರ ಒಂಬತ್ತು ಮಾಹಿತಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ‘ಸಮ್ಮೇಳನ ನಡೆಯುತ್ತಿದೆ ಎಂಬುದು ಗೊತ್ತು. ಆದರೆ, ಈ ಬಗ್ಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ನಮಗೆ ಅಧಿಕೃತ ಮಾಹಿತಿಯನ್ನೇ ನೀಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆಯುಕ್ತರೊಬ್ಬರು ‘ಪ್ರಜಾವಾಣಿ’ ಬಳಿ ಬೇಸರ ತೋಡಿಕೊಂಡರು.</p>.<p>‘ನಾನು ಮುಖ್ಯ ಆಯುಕ್ತ, ಉಳಿದ ವರೆಲ್ಲರೂ ನನ್ನ ಅಧೀನದಲ್ಲಿರಬೇಕು ಎಂಬ ಮನೋಭಾವ ಅವರಲ್ಲಿ ಇದ್ದಂತಿದೆ. ಕಾಯ್ದೆಗಳ ಪ್ರಕಾರ ಎಲ್ಲರೂ ಮಾಹಿತಿ ಆಯುಕ್ತರೇ. ನಮ್ಮಲ್ಲೇ ಈ ರೀತಿಯ ತಾರತಮ್ಯ ಇದ್ದರೆ ಹೇಗೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇನ್ನೊಬ್ಬ ಆಯುಕ್ತರು ಪ್ರಶ್ನಿಸಿದರು.</p>.<p>ಈ ಬೆಳವಣಿಗೆ ಬಗ್ಗೆ ಎನ್.ಜಿ. ಶ್ರೀನಿವಾಸ್ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತು. ಕರೆ ಸ್ವೀಕರಿಸಿದ ಅವರು, ವಿಷಯ ಪ್ರಸ್ತಾಪಿಸಿದ ಕೂಡಲೇ ಕರೆ ಸ್ಥಗಿತಗೊಳಿಸಿದರು. ಮತ್ತೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.</p>.<p><strong>‘ಮೇಲರಿಮೆ ಕಾರಣ ಇರಬಹುದು’</strong></p>.<p>‘ಮಾಹಿತಿ ಆಯುಕ್ತ ಎಂದರೆ ನಾನೊಬ್ಬನೇ ಎಂಬ ಭಾವನೆ ಅವರಲ್ಲಿ ಇರಬಹುದು. ಹೀಗಾಗಿ ಉಳಿದವರನ್ನೆಲ್ಲಾ ನಿರ್ಲಕ್ಷ್ಯ ಮಾಡಿದಿದ್ದಾರೆ’ ಎಂದು ಮಾಹಿತಿ ಆಯುಕ್ತ ಎಲ್. ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.</p>.<p>‘14 ವರ್ಷಗಳಿಂದ ನಡೆಯು<br />ತ್ತಿರುವ ಸಮ್ಮೇಳನಕ್ಕೆ ರಾಜ್ಯದಲ್ಲಿ ಮುಖ್ಯ ಆಯುಕ್ತರಾದವರು ಉಳಿದೆಲ್ಲಾ ಆಯುಕ್ತರನ್ನು ಕರೆದೊಯ್ಯುತ್ತಿದ್ದರು. ನಾನು ಕೂಡ ಈ ಹಿಂದೆ ಮುಖ್ಯ ಆಯುಕ್ತರ ಹುದ್ದೆ ನಿರ್ವಹಿಸಿದ್ದೇನೆ. ಎರಡು ಸಮ್ಮೇಳನಗಳಿಗೆ ಎಲ್ಲಾ ಮಾಹಿತಿ ಆಯುಕ್ತರನ್ನೂ ಕರೆದೊಯ್ದಿದ್ದೆ’ ಎಂದರು.</p>.<p>‘ಸಮ್ಮೇಳನದಲ್ಲಿ ಹಲವು ತಜ್ಞರು ವಿಷಯ ಮಂಡಿಸುತ್ತಾರೆ. ಭಾಗವಹಿಸಿದರೆ ನಮ್ಮ ಜ್ಞಾನ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಯಾವ ಕಾರಣಕ್ಕೆ ಸಮ್ಮೇಳನದ ವಿಷಯವನ್ನು ಮುಖ್ಯ ಆಯುಕ್ತರು ಮುಚ್ಚಿಟ್ಟಿದ್ದಾರೆಯೋ ಗೊತ್ತಿಲ್ಲ. ಆಯೋಗದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>