ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿರುವ ಅವರು, ‘40 ವರ್ಷಗಳ ಹಿಂದೆ ಬರೆದಿದ್ದ ‘ಭರತನಗರಿ’ ಕಾದಂಬರಿಯಲ್ಲಿ ರಾಷ್ಟ್ರಗೀತೆಯ ವಿಡಂಬನೆ ಮಾಡಿದ್ದಾರೆ ಎಂಬ ದೂರಿನಲ್ಲಿ ರಾಷ್ಟ್ರದ್ರೋಹ ಹೇಗೆ ಆಗುತ್ತದೆ, ಸಮುದಾಯಗಳ ಭಾವನೆಯನ್ನು ಹೇಗೆ ಕೆಡಿಸುತ್ತದೆ ಎಂಬುದನ್ನು ವಿವರಿಸಿಲ್ಲ. ಆದ್ದರಿಂದ ದೇಶದ್ರೋಹದ ಪ್ರಶ್ನೆ ಉದ್ಬವಿಸುವುದಿಲ್ಲ’ ಎಂದಿದ್ದಾರೆ.