ವಿಜಯಪುರ: ‘ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಬಗ್ಗೆ ಅಲ್ಲದೇ ಅವುಗಳ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡುವುದರ ಜೊತೆಗೆ ಹೇಳಿಕೆಯೂ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಜಯಪುರದ ಆಶ್ರಮ ಬಡಾವಣೆ ನಿವಾಸಿ ಪ್ರಕಾಶ ಚವ್ಹಾಣ ಎಂಬುವರು ಸೋಮವಾರ ಗಾಂಧಿ ಚೌಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.