ಎಂಜಿನಿಯರ್ ರಾಜಣ್ಣ ಬೊಮ್ಮೇಗೌಡ ಮಾತನಾಡಿ, ‘ನಾಗರಿಕರಿಗೆ ಮೂಲಸೌಲಭ್ಯ ನೀಡುವ ಸಮಯದಲ್ಲಿ ಗುತ್ತಿಗೆದಾರರು ಮರಗಳ ಬುಡಕ್ಕೆ ಡಾಂಬರು ಹಾಕಬಾರದು. ಪರಿಸರ, ಉತ್ತಮ ಗಾಳಿ ಬೇಕು. ಪತ್ರಿಕೆಯಲ್ಲಿ ವರದಿ ನೋಡಿ ನಾನೇ ಖುದ್ದಾಗಿ ನಿಂತು ಮರಗಳ ಬುಡಕ್ಕೆ ಹಾಕಿರುವ ಡಾಂಬರು ತೆರವುಗೊಳಿಸಿ, ಬೇರು, ಕಾಂಡಗಳಿಗೆ ಮಳೆ ನೀರು ಸೇರುವಂತೆ ಮಾಡಿಸಿದೆ’ ಎಂದರು.