‘ನಮಗೆ ಕಾಂಕ್ರೀಟ್ ಪಾದಚಾರಿ ಮಾರ್ಗಗಳು ಬೇಕಿಲ್ಲ. ‘ವಾಟರ್ ಫಾಲ್ಸ್’ನ ಅಗತ್ಯವೂ ಇಲ್ಲ. ನೈಸರ್ಗಿಕದತ್ತ ಕೆರೆ ನಮ್ಮ ಬೇಡಿಕೆ. ನಾವು ಕೆರೆಯ ದಂಡೆಯಲ್ಲಿ ಬೆಳೆದಿರುವ ಹಸಿರು ಹುಲ್ಲು ಹಾಸಿನ ಮೇಲೆಯೇ ಕುಳಿತು ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತೇವೆ. ಅಭಿವೃದ್ಧಿ ಹೆಸರಿನಲ್ಲಿ ಸ್ಯಾಂಕಿ ಕೆರೆಯ ಸೌಂದರ್ಯ ನಾಶಗೊಳಿಸಬೇಡಿ’ ಎಂದು ಮಲ್ಲೇಶ್ವರ ಸೋಷಿಯಲ್ ತಂಡದ ಸುಚಿತ್ರ ದೀಪ್ ಒತ್ತಾಯಿಸಿದರು.