ದೆಹಲಿಯಿಂದ ನಗರಕ್ಕೆ ವಾಪಸ್ ಆಗಿದ್ದ ಮಗುವಿಗೆ ಸೋಂಕು ತಗುಲಿದ್ದು, ಈಗ ಮಗು ತಂದೆ–ತಾಯಿಯಿಂದ ದೂರವಾಗಿ ಆಸ್ಪತ್ರೆ ಸೇರಿದೆ. ದಂಪತಿ ಹಾಗೂ ಮಗು ದೆಹಲಿಯಿಂದ ನಗರಕ್ಕೆ ಬಂದ ಬಳಿಕ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿ, ಅದರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಮಗುವಿಗೆ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಟಿಪ್ಪುನಗರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ಟೆಬಲ್ ಕೂಡ ಸೋಂಕಿತರಾಗಿದ್ದಾರೆ.