‘ಹಾಸಿಗೆಗಳ ಹಂಚಿಕೆ, ವೈದ್ಯಕೀಯ ಆಮ್ಲಜನಕ ವಿತರಣೆ ಸೇರಿದಂತೆ ವಿವಿಧ ವೈದ್ಯಕೀಯ ವ್ಯವಸ್ಥೆಯು ಸಮರ್ಪಕವಾಗಿ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಬಿಬಿಎಂಪಿ ಪೋರ್ಟಲ್ನಲ್ಲಿ ಪಾರದರ್ಶಕತೆ ತರಬೇಕು. ಆಗ ರೋಗಿಗಳಿಗೆ ಸಮಸ್ಯೆಯಾಗದಂತೆ ಹಾಸಿಗೆಗಳು ದೊರೆಯಲಿವೆ. ವೈದ್ಯಕೀಯ ಆಮ್ಲಜನಕ ಹಂಚಿಕೆಗೆ ಸಂಬಂಧಿಸಿದಂತೆ ವಲಯವಾರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಆಗ ಅಲೆದಾಟ ನಡೆಸುವುದು ತಪ್ಪಲಿದೆ’ ಎಂದು ಹೇಳಿದರು.