ಸಂಸ್ಥೆಗೆ ಸಾಮಾನ್ಯ ದಿನಗಳಲ್ಲಿ ರಾಜ್ಯದ ವಿವಿಧೆಡೆಯಿಂದ ನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು. 1,300 ಮಂದಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ಭೀತಿ ಹೆಚ್ಚಿದ ಬೆನ್ನಲ್ಲಿಯೇ ಸರ್ಕಾರದ ಸೂಚನೆ ಅನುಸಾರ ಸಂಸ್ಥೆಯು ತುರ್ತಾಗಿ ಅಗತ್ಯ ಇರುವ ಚಿಕಿತ್ಸೆಗಳಿಗೆ ಮಾತ್ರ ಬರುವಂತೆ ರೋಗಿಗಳಲ್ಲಿ ಮನವಿ ಮಾಡಿ, ಕೆಲ ಚಿಕಿತ್ಸೆಗಳನ್ನು ಮುಂದೂಡುವಂತೆ ಸೂಚಿಸಿತ್ತು.