<p><strong>ಬೆಂಗಳೂರು:</strong> ತಳ್ಳುಗಾಡಿಯಲ್ಲಿದ್ದ ರೈಸ್ ಬಾತ್ ತಿಂದಿದ್ದ ನಾಲ್ವರು ದುಷ್ಕರ್ಮಿಗಳು, ಹಣ ಕೇಳಿದ್ದಕ್ಕಾಗಿ ತಳ್ಳುಗಾಡಿಯ ಮಾಲೀಕ ಲಕ್ಷ್ಮಿನಾರಾಯಣ ಮೇಲೆಯೇ ಕಾದ ಎಣ್ಣೆ ಎರಚಿ ಪರಾರಿಯಾಗಿದ್ದಾರೆ. ಹೊಸಕೆರೆಹಳ್ಳಿಯ 100 ಅಡಿ ಹೊರರಸ್ತೆಯ ಕೆಇಬಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.ಲಕ್ಷ್ಮಿನಾರಾಯಣ ಅವರ ಮೈ ಮೇಲೆ ಗಾಯಗಳಾಗಿದ್ದು, ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನೀಡಿರುವ ಹೇಳಿಕೆ ಆಧರಿಸಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಸ್ಥಳೀಯ ಜನಶಕ್ತಿನಗರದ ಲಕ್ಷ್ಮಿನಾರಾಯಣ ಹಾಗೂ ಅವರ ಕುಟುಂಬದವರು, ತಳ್ಳುಗಾಡಿ ಇಟ್ಟುಕೊಂಡು ತಿಂಡಿ ಹಾಗೂ ಊಟ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಇದೇ 29ರಂದು ಸಂಜೆ ತಳ್ಳುಗಾಡಿ ಬಳಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ರೈಸ್ ಬಾತ್ ತಿಂದಿದ್ದರು. ಹಣ ನೀಡದೆ ವಾಪಸ್ ಹೋಗುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಲಕ್ಷ್ಮಿನಾರಾಯಣ, ಹಣ ನೀಡುವಂತೆ ವಿನಂತಿಸಿದ್ದರು.’</p>.<p>‘ಲಕ್ಷ್ಮಿನಾರಾಯಣ ಜೊತೆ ಜಗಳ ತೆಗೆದಿದ್ದ ದುಷ್ಕರ್ಮಿಗಳು, ‘ನಾವು ಯಾರು ಗೊತ್ತಾ? ಹಣ ಕೇಳುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಳ್ಳುಗಾಡಿಯ ಬಾಣಲೆಯಲ್ಲಿದ್ದ ಕಾದ ಎಣ್ಣೆಯನ್ನು ಎರಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಳ್ಳುಗಾಡಿಯಲ್ಲಿದ್ದ ರೈಸ್ ಬಾತ್ ತಿಂದಿದ್ದ ನಾಲ್ವರು ದುಷ್ಕರ್ಮಿಗಳು, ಹಣ ಕೇಳಿದ್ದಕ್ಕಾಗಿ ತಳ್ಳುಗಾಡಿಯ ಮಾಲೀಕ ಲಕ್ಷ್ಮಿನಾರಾಯಣ ಮೇಲೆಯೇ ಕಾದ ಎಣ್ಣೆ ಎರಚಿ ಪರಾರಿಯಾಗಿದ್ದಾರೆ. ಹೊಸಕೆರೆಹಳ್ಳಿಯ 100 ಅಡಿ ಹೊರರಸ್ತೆಯ ಕೆಇಬಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.ಲಕ್ಷ್ಮಿನಾರಾಯಣ ಅವರ ಮೈ ಮೇಲೆ ಗಾಯಗಳಾಗಿದ್ದು, ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನೀಡಿರುವ ಹೇಳಿಕೆ ಆಧರಿಸಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಸ್ಥಳೀಯ ಜನಶಕ್ತಿನಗರದ ಲಕ್ಷ್ಮಿನಾರಾಯಣ ಹಾಗೂ ಅವರ ಕುಟುಂಬದವರು, ತಳ್ಳುಗಾಡಿ ಇಟ್ಟುಕೊಂಡು ತಿಂಡಿ ಹಾಗೂ ಊಟ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಇದೇ 29ರಂದು ಸಂಜೆ ತಳ್ಳುಗಾಡಿ ಬಳಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ರೈಸ್ ಬಾತ್ ತಿಂದಿದ್ದರು. ಹಣ ನೀಡದೆ ವಾಪಸ್ ಹೋಗುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಲಕ್ಷ್ಮಿನಾರಾಯಣ, ಹಣ ನೀಡುವಂತೆ ವಿನಂತಿಸಿದ್ದರು.’</p>.<p>‘ಲಕ್ಷ್ಮಿನಾರಾಯಣ ಜೊತೆ ಜಗಳ ತೆಗೆದಿದ್ದ ದುಷ್ಕರ್ಮಿಗಳು, ‘ನಾವು ಯಾರು ಗೊತ್ತಾ? ಹಣ ಕೇಳುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಳ್ಳುಗಾಡಿಯ ಬಾಣಲೆಯಲ್ಲಿದ್ದ ಕಾದ ಎಣ್ಣೆಯನ್ನು ಎರಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>