ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ ಬರೆದಿಟ್ಟು ಕುಟುಂಬ ನಾಪತ್ತೆ?

Last Updated 19 ಆಗಸ್ಟ್ 2021, 3:02 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ವಾಸವಿದ್ದ ಕುಟುಂಬವೊಂದು ದಿಢೀರ್ ನಾ‍ಪತ್ತೆಯಾಗಿದ್ದು, ಮನೆಯಲ್ಲಿ ಪತ್ರವೊಂದು ಪತ್ತೆಯಾಗಿದೆ.

ಮನೆಯಲ್ಲಿ ಗಾಂಧಿ ಮತ್ತು ಶಾಲಿನಿ ದಂಪತಿ, ಪುತ್ರಿಯರಾದ ಭಾನುಶ್ರೀ ಮತ್ತು ಹೇಮಶ್ರೀ ವಾಸವಿದ್ದರು. ಇದೇ ಕುಟುಂಬದ ಚಿರಂಜೀವಿ ತುಮಕೂರಿನಲ್ಲಿದ್ದರು.

ಪ್ರತಿದಿನವೂ ಮನೆಯವರಿಗೆ ಕರೆ ಮಾಡಿಚಿರಂಜೀವಿ ಮಾತನಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕರೆ ಮಾಡಿದಾಗ ಎಲ್ಲರ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಚಿರಂಜೀವಿ ಮನೆಯ ಸಮೀಪದಲ್ಲಿದ್ದ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸಿದ್ದರು. ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದಿರುವ ವಿಷಯವನ್ನು ಗೆಳೆಯ ಚಿರಂಜೀವಿ ಗಮನಕ್ಕೆ ತಂದಿದ್ದರು.

ಮನೆಯಲ್ಲಿರುವ ಪ‍ತ್ರದಲ್ಲಿ ‘ನಮಗೆ ಈ ಜೀವನ ಬೇಡ. ದಯವಿಟ್ಟು ನಮ್ಮನ್ನು ಸಾಯಲು ಬಿಡಿ’ ಎಂದು ಬರೆಯಲಾಗಿದೆ. ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT